Friday, September 20, 2024

ಪ್ರಾಯೋಗಿಕ ಆವೃತ್ತಿ

ಮಂಡ್ಯ| ಸುಭಾಷ್ ಪಾಳೇಕರ್ ಹುಟ್ಟುಹಬ್ಬ: ತೆಂಗಿನ ಸಸಿಗಳ ವಿತರಣೆ

ಮಂಡ್ಯದ ನಿರ್ಮಲ ಭೂಮಾತಾ ಸುಭಾಷ್ ಪಾಳೇಕ‌ರ್ ಕೃಷಿ ಆಂದೋಲನದ ವತಿಯಿಂದ ಪದ್ಮಶ್ರೀ ಡಾ. ಸುಭಾಷ್ ಪಾಳೇಕರ್ ಅವರ 75ನೇ ವರ್ಷದ ಹುಟ್ಟುಹಬ್ಬದ ಅಂಗವಾಗಿ ಜು.20ರಂದು ಬೆಳಿಗ್ಗೆ 10 ಗಂಟೆಗೆ ಮಂಡ್ಯನಗರದ ಕರ್ನಾಟಕ ಸಂಘದಲ್ಲಿ 75 ಜನ ರೈತರಿಗೆ ತೆಂಗಿನ ಸಸಿ ವಿತರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ನೈಸರ್ಗಿಕ ಕೃಷಿಕ ಅನಂತರಾವ್ ಕೆರಗೋಡು ತಿಳಿಸಿದರು.

ಮಂಡ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೂತನವಾಗಿ ಸುಭಾಷ್ ಪಾಳೇಕರ್ ಕೃಷಿ ಪದ್ದತಿ ಅಳವಡಿಸಿರುವ ಕೃಷಿಕರಿಗೆ ಜೀವಾಮೃತ ಸತ್ವಧಾನ್ಯಾಮೃತ, ಭತ್ತ ಬೆಳೆಯುವ ವಿಧಾನ ಹೂಮಸ್‌ನ ಅರಿವು ಮೂಡಿಸುವ ಕರಪತ್ರ ನೀಡಿ ಸ್ವಾಗತಿಸಲಾಗುವುದು ಎಂದರು.

ಅಂದಿನ ಕಾರ್ಯಕ್ರಮವನ್ನು ಶಾಸಕ ದಿನೇಶ್‌ಗೂಳಿಗೌಡ ಉದ್ಘಾಟಿಸಲಿದ್ದು, ಶಾಸಕ ಪಿ. ರವಿಕುಮಾರ್‌ಗೌಡ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಬಿಜೆಪ ಮುಖಂಡ ಎನ್. ಶಿವಣ್ಣರ, ಪಿಇಟಿ ಅಧ್ಯಕ್ಷ  ಕೆ.ಎಸ್.ವಿಜಯ್ ಆನಂದ್, ಜೆಡಿಎಸ್ ಜಿಲ್ಲಾಧ್ಯಕ್ಷ ಡಿ. ರಮೇಶ್‌, ತಾ.ಪಂ.ಮಾಜಿ ಅಧ್ಯಕ್ಷ ಟಿ. ತ್ಯಾಗರಾಜು, ಮಂಡ್ಯ ಜಿಲ್ಲಾ ಕೆ.ಡಿ.ಪಿ ಸದಸ್ಯ ಸಿ.ಎಂ. ದ್ಯಾವಪ್ಪ, ಸಂಪೂರ್ಣ ಸಾವಯವ ಕೃಷಿಕರ ಸಂಘ ಅಧ್ಯಕ್ಷ  ಎಂ.ಎನ್.ಮಹೇಶ್‌ಕುಮಾರ್‌ ಭಾಗವಹಿಸುವರು. ಇದೇ ಸಂದರ್ಭದಲ್ಲಿ ಹಿರಿಯ ಕೃಷಿಕ ಅಂಬರಹಳ್ಳಿ ರಾಜಣ್ಣ ಅವರನ್ನ ಸನ್ಮಾನಿಸಲಾಗುವುದು ಎಂದರು.

ಗೋಷ್ಠಿಯಲ್ಲಿ ಸೋಮಶೇಖರ್, ಮಂಜು, ಸ್ವಾಮಿ, ಹರೀಶ್,  ದಯಾನಂದ್ ಮತ್ತಿತರರು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!