Thursday, September 19, 2024

ಪ್ರಾಯೋಗಿಕ ಆವೃತ್ತಿ

ಬೂತ್‌ ವಿಜಯ್‌ ದಿವಸ್ ಕಾರ್ಯಕ್ರಮಕ್ಕೆ ಎಚ್.ಪಿ.ಮಹೇಶ್ ಚಾಲನೆ

ಮಂಡ್ಯದ ಅಶೋಕ ನಗರದಲ್ಲಿ ಬಿಜೆಪಿ ಜಿಲ್ಲಾ ಯುವಮೋರ್ಚಾ ವತಿಯಿಂದ ಬೂತ್‌ ವಿಜಯ್‌ ದಿವಸ್‌ ಕಾರ್ಯಕ್ರಮ ಆಚರಿಸಲಾಯಿತು.

ಬಿಜೆಪಿ ಮುಖಂಡ ಎಚ್‌.ಪಿ.ಮಹೇಶ್‌ ಮಾತನಾಡಿ, ಭಾರತೀಯ ಜನತಾ ಪಕ್ಷ ಕರೆಕೊಟ್ಟಿದ್ದ ಮೇರೆಗೆ ಬೂತ್‌ ವಿಜಯ್‌ ದಿವಸ್ ಕಾರ್ಯಕ್ರಮಕ್ಕೆ ಬಿಜಿಪಿ ನಾಯಕರಾದ ವಿದ್ಯಾ ನಾಗೇಂದ್ರ ಅವರ ಮನೆಯಲ್ಲಿ ಚಾಲನೆ ನೀಡಿದ್ದೇವೆ ಎಂದರು.

ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರುವ ಭಾಗವಾಗಿ ಬೂತ್ ವಿಜಯ ದಿವಸ್‌ ಅನ್ನು ಆಚರಿಸುತ್ತಿದ್ದೇವೆ.ಆ ಮೂಲಕ ಬಿಜೆಪಿ ಬಲಿಷ್ಠಗೊಳಿಸಲು ಸಜ್ಜಾಗಿದ್ದೇವೆ ಎಂದರು.

ಬೂತ್ ವಿಜಯ್ ದಿವಸ್ ಕಾರ್ಯಕ್ರಮ ನಡೆಸಿ ಕೇಂದ್ರಕ್ಕೆ ವಿಷಯ ರವಾನಿಸುತ್ತಿದ್ದೇವೆ. ಈ ಅಭಿಯಾನ ಯಶಸ್ವಿಯಾಗಲು ಬಿಜೆಪಿ ಕಾರ್ಯಕರ್ತರು ಮತ್ತು ಮುಖಂಡರ ಸೇವೆ ಬಹಳ ಮುಖ್ಯ ಎಂದು ತಿಳಿಸಿದರು.

ಬಿಜೆಪಿ ನಾಯಕರಾದ ವಿದ್ಯಾ ನಾಗೇಂದ್ರ, ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ವಿಶೃತ್ ನಾಗೇಂದ್ರ, ಮುಖಂಡರಾದ ಮಹಾಂತಪ್ಪ, ಪುಟ್ಟರ್‌ಮಲ್ ಜೈನ್, ಟಿ.ಎಸ್.ವಿವೇಕ್‌, ಹೊಸಹಳ್ಳಿ ಶಿವು, ಲೋಕೇಶ್‌, ಬೋರಪ್ಪ, ಮರ್ದಿನಿ ರಮೇಶ್, ನಿತ್ಯಾನಂದ, ಮಲ್ಲಿಕಾರ್ಜುನ್, ಹನುಮಂತು, ಶಕುಂತಲ ಸೇರಿದಂತೆ ಬಿಜೆಪಿ ಕಾರ್ಯಕರ್ತರು ಮತ್ತು ಮುಖಂಡರು ಭಾಗವಹಿಸಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!