ಜಮ್ಮು ಮತ್ತು ಕಾಶ್ಮೀರದಲ್ಲಿ ಅಪರೂಪದ ಖನಿಜ ಲಿಥಿಯಂನ ವಾಣಿಜ್ಯ ಅನ್ವೇಷಣೆಗೆ ಕೇಂದ್ರ ಸರ್ಕಾರ ಸಜ್ಜಾಗಿದೆ ಎಂಬ ಸುದ್ದಿ ಬಂದ ನಂತರ, ಕರ್ನಾಟಕವೂ ಮಂಡ್ಯ ಜಿಲ್ಲೆಯ ಲಿಥಿಯಂ ನಿಕ್ಷೇಪಗಳ ಬಗ್ಗೆ ಪರಮಾಣು ಖನಿಜಗಳ ಪರಿಶೋಧನೆ ಮತ್ತು ಸಂಶೋಧನಾ ನಿರ್ದೇಶನಾಲಯದಿಂದ (AMD) ಸಿಹಿ ಸುದ್ದಿಯನ್ನು ಎದುರು ನೋಡುತ್ತಿದೆ. .
2020 ಮತ್ತು 2021 ರ ನಡುವೆ ಲಿಥಿಯಂ ನಿಕ್ಷೇಪಗಳನ್ನು ಪ್ರಸ್ತಾಪದ ನಂತರ, ಈ ನಿಟ್ಟಿನಲ್ಲಿ ಸಂಬಂಧಿಸಿದ ಅಧಿಕಾರಿಗಳಿಂದ ಯಾವುದೇ ಮಹತ್ವದ ಬೆಳವಣಿಗೆ ಇರಲಿಲ್ಲ. ಈಗ ಕರ್ನಾಟಕದಲ್ಲಿ ಹೊಸ ಬೆಳವಣಿಗೆ ಭರವಸೆ ಮೂಡಿಸಿದೆ.
ಎಎಮ್ಡಿಯಿಂದ ಮೇಲ್ಮೈ ಮತ್ತು ಸೀಮಿತ ಉಪಮೇಲ್ಮೈಯ ಮೇಲಿನ ಪ್ರಾಥಮಿಕ ಸಮೀಕ್ಷೆಗಳು ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಮರಳಗಾಲ -ಅಲ್ಲಾಪಟ್ನ ಪ್ರದೇಶದ ಪೆಗ್ಮಾಟೈಟ್ಗಳಲ್ಲಿ 1,600 ಟನ್ಗಳ ಲಿಥಿಯಂ ಸಂಪನ್ಮೂಲಗಳ ಉಪಸ್ಥಿತಿಯನ್ನು ತೋರಿಸಿವ ಎನ್ನಲಾಗುತ್ತಿದೆ.
ಮಂಡ್ಯ ಹೊರತುಪಡಿಸಿ, ಎಎಮ್ಡಿ ಲಿಥಿಯಂಗಾಗಿ ಯಾದಗಿರಿ ಜಿಲ್ಲೆಯ ಕೆಲವು ಭಾಗಗಳಲ್ಲಿ ಸಂಭಾವ್ಯ ಭೂವೈಜ್ಞಾನಿಕ ಕ್ಷೇತ್ರಗಳಲ್ಲಿ ಅನ್ವೇಷಣೆಯನ್ನು ನಡೆಸುತ್ತಿದೆ ಎಂದು ಮೂಲಗಳು ವಿವರಿಸುತ್ತವೆ.
ಈ ಸಂಬಂಧ, ಆರ್ಥಿಕ ಕಾರ್ಯಸಾಧ್ಯತೆಯನ್ನು ಸಾಧಿಸಲು ಕೆಲಸ ಮಾಡಬೇಕಾಗಿದೆ ಎಂದು ತಜ್ಞರು ಹೇಳುತ್ತಾರೆ. ಲಿಥಿಯಂನ ಪರಿಶೋಧನೆಯು ಕಾರ್ಯಸಾಧ್ಯವಾದರೆ, ಭಾರತೀಯ ಆಟೋಮೊಬೈಲ್ ಕ್ಷೇತ್ರಕ್ಕೆ ದೊಡ್ಡ ರೀತಿಯಲ್ಲಿ ಸಹಾಯ ಮಾಡುತ್ತದೆ.
ಕೇಂದ್ರ ರಾಜ್ಯ ಸಚಿವ (ಸ್ವತಂತ್ರ ಉಸ್ತುವಾರಿ), ಪರಮಾಣು ಶಕ್ತಿ ಮತ್ತು ಬಾಹ್ಯಾಕಾಶ, ಜಿತೇಂದ್ರ ಸಿಂಗ್, ಮರಳಗಾಲ- ಅಲ್ಲಾಪಟ್ನದಲ್ಲಿ ಲಿಥಿಯಂನ ಮಹತ್ವ ಮತ್ತು ಪ್ರಮಾಣವನ್ನು ಸಂಪೂರ್ಣ ಪ್ರದೇಶದಲ್ಲಿ ಪರಿಶೋಧನೆ ಪೂರ್ಣಗೊಂಡ ನಂತರವೇ ಸ್ಥಾಪಿಸಬಹುದು ಎಂದು ಹೇಳಿದ್ದಾರೆ.