Thursday, September 19, 2024

ಪ್ರಾಯೋಗಿಕ ಆವೃತ್ತಿ

ಮದ್ದೂರು| ಸೌಹಾರ್ದತೆಗೆ ಸಾಕ್ಷಿಯಾದ ಜಾತ್ರೆ: ಹಿಂದೂ ಭಕ್ತರಿಗೆ ಮುಸ್ಲಿಮರಿಂದ ಮಜ್ಜಿಗೆ ವಿತರಣೆ

ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಮರಳಿಗ ಗ್ರಾಮದ ಚನ್ನಕೇಶ್ವರ ಬೀರೇಶ್ವರ ಸ್ವಾಮಿ ಜಾತ್ರಾ ಮಹೋತ್ಸವದಲ್ಲಿ ಹಿಂದು ಭಕ್ತರಿಗೆ ಮುಸ್ಲಿಂ ಯುವಕರು ಮಜ್ಜಿಗೆ ವಿತರಿಸಿದ್ದಾರೆ. ಆ ಮೂಲಕ ಜಿಲ್ಲೆಯಲ್ಲಿ ಸೌಹಾರ್ದತೆ ಸಾರಿದ್ದಾರೆ.

ಸೌಹಾರ್ದ ಕಾರ್ಯದ ಬಗ್ಗೆ ಮಾತನಾಡಿದ ಮರಳಿಗ ಗ್ರಾಮ ಪಂಚಾಯತಿ ಸದಸ್ಯ ಪರ್ವಿಜ್, “ಜಾತ್ರಾ ಮಹೋತ್ಸವಕ್ಕೆ ಜಿಲ್ಲೆ ಹಾಗೂ ರಾಜ್ಯದ ನಾನಾ ಭಾಗಗಳಿಂದ ಸಾವಿರಾರು ಭಕ್ತರು ಬರುತ್ತಾರೆ. ಅವರೆಲ್ಲರಿಗೂ ಅನುಕೂಲವಾಗಲಿ ಎಂಬ ಉದ್ದೇಶದಿಂದ ಮರಳಿಗ ಯುವ ಬ್ರಿಗೇಡ್ ಮತ್ತು ಮುಸ್ಲಿಂ ಯುವಕರ ತಂಡದಿಂದ ಮಜ್ಜಿಗೆ ವಿತರಣೆ ಮಾಡಿದ್ದೇವೆ” ಎಂದು ಹೇಳಿದ್ದಾರೆ.

“ಮರಳಿಗ ಗ್ರಾಮದಲ್ಲಿ ನಾವೆಲ್ಲರೂ ಒಗ್ಗಟ್ಟಿನಿಂದ ಬದುಕುತ್ತಿದ್ದೇವೆ. ನಮ್ಮಲ್ಲಿ ಯಾವುದೇ ಜಾತಿ, ಧರ್ಮದ ಭೇದವಿಲ್ಲ” ಎಂದು ಅವರು ಹೇಳಿದ್ದಾರೆ.

ಮಜ್ಜಿಗೆ ವಿತರಣೆ ವೇಳೆ, ಗ್ರಾಮ ಪಂಚಾಯತಿ ಸದಸ್ಯ ಸೋಮಶೇಖರ್, ಗ್ರಾಮದ ಮುಖಂಡ ಭರತ್, ಚಂದ್ರ, ಪ್ರಜ್ವಲ್, ಚಂದ್ರೇಗೌಡ, ಅಭಿಷೇಕ್, ಅಪ್ಪುಗೌಡ, ವಿಕಾಸ್, ಪುನಿ, ಕೆ.ಎಂ.ಅಹಮ್ಮದ್, ಶುಹೆಬ್, ನಯಾಜ್, ಅಪ್ಸರ್, ಬಕಷ್, ಯಾಸಿನ್, ಜಾವೀದ್ ಇದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!