ಕನ್ನಡ ಚಿತ್ರರಂಗಕ್ಕೆ ಡಾ. ರಾಜಕುಮಾರ್ ಕೊಡುಗೆ ಅಪಾರ ಎಂದು ಮಂಡ್ಯ ಜಿಲ್ಲಾ ಡಾ. ರಾಜಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷ ಜಿ.ಟಿ.ರವೀಂದ್ರ ಕುಮಾರ್ ತಿಳಿಸಿದರು.
ಮಂಡ್ಯ ನಗರದ ಸಿಲ್ವರ್ ಜ್ಯುಬಿಲಿ ಪಾರ್ಕ್ ನಲ್ಲಿ ಅಖಿಲ ಕರ್ನಾಟಕ ಡಾ. ರಾಜಕುಮಾರ್ ಅಭಿಮಾನಿಗಳ ಸಂಘ ಹಾಗೂ ಮಂಡ್ಯ ಜಿಲ್ಲಾ ಡಾ. ರಾಜಕುಮಾರ್ ಅಭಿಮಾನಿಗಳ ಸಂಘದ ವತಿಯಿಂದ ನಡೆದ ಡಾ.ರಾಜಕುಮಾರ್ ರವರ 95ನೇ ಹುಟ್ಟುಹಬ್ಬ ಆಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಗೋಕಾಕ್ ಚಳುವಳಿಯಂತಹ ದೊಡ್ಡ ಕನ್ನಡಪರ ಚಳುವಳಿಯನ್ನು ಮಾಡಿ ಕನ್ನಡಿಗರ ಎದೆಯಲ್ಲಿ ಕನ್ನಡತನವನ್ನು ಎಚ್ಚರಿಸಿದವರು ಡಾ.ರಾಜಕುಮಾರ್, ಪ್ರತಿ ವರ್ಷದಂತೆ ಡಾ.ರಾಜಕುಮಾರ್ ಹುಟ್ಟು ಹಬ್ಬವನ್ನು ಆಚರಣೆ ಮಾಡುವ ಮೂಲಕ ಕನ್ನಡಿಗರಿಗೆ ಡಾ.ರಾಜಕುಮಾರ್ ಅವರ ಕನ್ನಡ ಸೇವೆಯನ್ನು ತಿಳಿಸುವ ಕೆಲಸ ಮಾಡುತ್ತಿದ್ದೇವೆಂದರು.
ಚುನಾವಣೆ ಘೋಷಣೆಯಾಗಿ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ರಾಜಕುಮಾರ್ ಅವರ ಹುಟ್ಟು
ಹಬ್ಬವನ್ನು ಸರಳವಾಗಿ ಆಚರಿಸುವ ಮೂಲಕ ಸಾರ್ವಜನಿಕರಿಗೆ ಲಘು ಉಪಹಾರ ನೀಡಲಾಯಿತು.
ಮುಂದಿನ ವರ್ಷ ಮಂಡ್ಯ ಜಿಲ್ಲೆಯಾದ್ಯಂತ ಡಾ.ರಾಜಕುಮಾರ್ ಹುಟ್ಟು ಹಬ್ಬವನ್ನು ವಿಜೃಂಭಣೆಯಿಂದ ಆಚರಿಸ ಲಾಗುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಅಭಿಮಾನಿಗಳಾದ ಡಿ.ಸುರೇಶ್ ಬಾಬು, ಪ್ರವೀಣ್ ಕುಮಾರ್, ಆನಂದ್ ಹಾಜರಿದ್ದರು.