Friday, September 20, 2024

ಪ್ರಾಯೋಗಿಕ ಆವೃತ್ತಿ

ದ್ವಾರಕನಗರ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ

ಮಂಡ್ಯ ನಗರದ ದ್ವಾರಕನಗರ ಬಡಾವಣೆಯಲ್ಲಿ ಕಾವೇರಿ ನೀರಾವರಿ ನಿಗಮದ ಎಸ್‌ಸಿಪಿ ಅನುದಾನದಿಂದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಬಡಾವಣೆ ನಿವಾಸಿಗಳೇ ಮಂಗಳವಾರ ಭೂಮಿಪೂಜೆ ನೆರವೇರಿಸಿದರು. ಶಾಸಕ ಎ.ಎಸ್.ರವೀಂದ್ರ ಶ್ರೀಕಂಠಯ್ಯ ಅವರ ಅನುಪಸ್ಥಿತಿಯಲ್ಲಿ ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಬಡಾವಣೆ ನಿವಾಸಿಗಳೇ ರಸ್ತೆ ಕಾಮಗಾರಿಗೆ ಚಾಲನೆ ನೀಡಿದರು.

ಈ ವೇಳೆ ಮಾತನಾಡಿದ ಬೇಲೂರು ಗ್ರಾ.ಪಂ.ಸದಸ್ಯ ಅವಿನಾಶ್, ಶಾಸಕ ರವೀಂದ್ರ ಶ್ರೀಕಂಠಯ್ಯ ಅವರು ಬಡಾವಣೆ ರಸ್ತೆ ಅಭಿವೃದ್ಧಿಗಾಗಿ ನಿಗಮದ ಮೂಲಕ 15 ಲಕ್ಷ ರೂ. ಅನುದಾನ ಮಂಜೂರು ಮಾಡಿಸಿದ್ದರು. ಆದರೆ, ತುರ್ತು ಕಾರ‍್ಯದ ನಿಮಿತ್ತ ಶಾಸಕರು ಬೆಂಗಳೂರಿಗೆ ತೆರಳಿದ ಹಿನ್ನಲೆಯಲ್ಲಿ ಬಡಾವಣೆ ನಿವಾಸಿಗಳಿಂದಲೇ ಭೂಮಿಪೂಜೆ ನೆರವೇರಿಸಲಾಗಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಗ್ರಾ.ಪಂ. ಸದಸ್ಯರಾದ ಸುವರ್ಣಾವತಿ, ಮಂಜುಳಾ, ಮಮತಾ, ಜ್ಯೋತಿ, ಸಹಾಯಕ ಕಾರ‍್ಯಪಾಲಕ ಎಂಜಿನಿಯರ್ ಎಂ.ವಿಶ್ವನಾಥ್, ಕಿರಿಯ ಎಂಜಿನಿಯರ್ ಜಿ.ಎನ್.ಕೆಂಪರಾಜು, ದ್ವಾರಕನಗರ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಎಚ್.ಎಂ.ಬಸವರಾಜು, ಉಪಾಧ್ಯಕ್ಷೆ ಪವಿತ್ರ ನಾಗರಾಜ್, ಪ್ರಧಾನ ಕಾರ‍್ಯದರ್ಶಿ ಎ.ಎಂ.ಸಂದೇಶ್, ಸಂಘಟನಾ ಕಾರ‍್ಯದರ್ಶಿ ಕುಮಾರ್, ನಿರ್ದೇಶಕರಾದ ಶ್ರೀನಾಥ್, ಮಹೇಶ್, ಚಂದ್ರೇಗೌಡ, ನವೀನ್ ಚಿಕ್ಕಮಂಡ್ಯ, ಬಾಲಾಜಿ, ಬಡಾವಣೆ ನಿವಾಸಿಗಳಾದ ಸ್ಫೂರ್ತಿ, ಸುಧಾ, ನಾಗರಾಜ್, ಎಂ.ವೀರಭದ್ರ, ಅಶೋಕ್, ನಂದೀಶ್, ಗುತ್ತಿಗೆದಾರ ಬೇವಿನಹಳ್ಳಿ ರಮೇಶ್ ಇತರರು ಭಾಗವಹಿಸಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!