Saturday, May 18, 2024

ಪ್ರಾಯೋಗಿಕ ಆವೃತ್ತಿ

ಡಿ. ಕೆ. ಶಿವಕುಮಾರ್ ಗೆ ಸಿಎಂ ಸ್ಥಾನ ನೀಡಲು ಒಕ್ಕಲಿಗರ ಸಂಘ ಆಗ್ರಹ

  • ಡಿ. ಕೆ. ಶಿವಕುಮಾರ್ ಗೆ ಮುಖ್ಯಮಂತ್ರಿ ಮಾಡಲು ಆಗ್ರಹಿಸಿ ನಾಳೆ ಅಖಿಲ ಕರ್ನಾಟಕ ಒಕ್ಕಲಿಗರ ಸಂಘ ಪತ್ರಿಕಾಗೋಷ್ಠಿ

ಕೆಪಿಸಿಸಿ ಅಧ್ಯಕ್ಷ ಮತ್ತು ಶಾಸಕ  ಡಿ. ಕೆ. ಶಿವಕುಮಾರ್   ಶ್ರಮದ ಫಲವಾಗಿ ಕಾಂಗ್ರೆಸ್ ಪಕ್ಷಕ್ಕೆ ಬಹುಮತ ಬಂದಿದ್ದು, ಕಳೆದ ಮೂರು ದಿನಗಳಿಂದ ಕಾಂಗ್ರೆಸ್ ಹೈಕಮಾಂಡ್ ಡಿ .ಕೆ. ಶಿವಕುಮಾರ್ ಗೆ ಪೂರ್ಣಾವಧಿಗೆ ಮುಖ್ಯಮಂತ್ರಿ ಮಾಡುವಲ್ಲಿ ಮೀನ ಮೇಷ ಎಣಿಸುತ್ತಿದ್ದು, ಸಿದ್ದರಾಯಮ್ಯರವರಿಗೆ ಮೊದಲ ಅವಧಿಗೆ ಮುಖ್ಯಮಂತ್ರಿ ಮಾಡಲು ಹುನ್ನಾರ ಮಾಡುತ್ತಿರುವ ಕ್ರಮವನ್ನು ಖಂಡಿಸಿ ನಾಳೆ ಮಂಡ್ಯದ ಪತ್ರಿಕಾ ಭವನದಲ್ಲಿ ಅಖಿಲ ಕರ್ನಾಟಕ ಒಕ್ಕಲಿಗರ ಸಂಘ ಪತ್ರಿಕಾ ಗೋಷ್ಠಿ ಕರೆದಿದೆ.

ಶ್ರೀ ಮಠದ ಪೀಠಾಧ್ಯಕ್ಷರಾದ ನಿರ್ಮಲಾನಂದನಾಥ ಸ್ವಾಮೀಜಿಯವರು ಹಾಗೂ ನಂಜಾವದೂತ ಸ್ವಾಮೀಜಿ    ಆಗ್ರಹ ಮಾಡಿದ್ದರು. ಈ ಬಗ್ಗೆ ಕ್ರಮ ವಹಿಸದ ಕಾಂಗ್ರೆಸ್ ವರಿಷ್ಠರ ಕ್ರಮವನ್ನು ಅಖಿಲ‌ ಕರ್ನಾಟಕ ಒಕ್ಕಲಿಗರ ಸಂಘದ ಗ್ರಾಮೀಣ ಘಟಕದ ಗೌರವಾಧ್ಯಕ್ಷ ಎಲ್. ಶಿವಶಂಕರ್ ಅವರು ಖಂಡಿಸಿದ್ದಾರೆ

ಈ ಬಗ್ಗೆ ನಾಳೆ ದಿ 18-5-2023 ರಂದು ಬೆಳಿಗ್ಗೆ 10.30 ಕ್ಕೆ  ಮಂಡ್ಯದ ಪತ್ರಕರ್ತರ ಭವನದಲ್ಲಿ ಒಕ್ಕಲಿಗರ ಸೇವಾ ಟ್ರಸ್ಟ್ ವತಿಯಿಂದ ಪತ್ರಿಕಾ ಗೋಷ್ಠಿಯನ್ನು ಕರೆಯಲಾಗಿದೆ

ಪತ್ರಿಕಾ ಗೋಷ್ಠಿಯ ನಂತರ ಮುಂದಿನ ಬೆಳವಣಿಗೆ ಕುರಿತು ಹೋರಾಟದ ರೂಪುರೇಷೆಗಳನ್ನು ಸಿದ್ದಗೊಳಿಸಲಾಗುವುದು ಎಂದು ಎಲ್. ಶಿವಶಂಕರ್  ತಿಳಿಸಿದ್ದಾರೆ.

ಆದ್ದರಿಂದ ತಪ್ಪದೆ ಅಖಿಲ ಕರ್ನಾಟಕ ಒಕ್ಕಲಿಗರ ಸಂಘದ ಪದಾಧಿಕಾರಿಗಳು ಹಾಗು ಕುಲ-ಭಾಂದವರು ಸಕಾಲಿಕವಾಗಿ ಈ ಸಭೆಗೆ ಭಾಗವಹಿಸಲು ಈ ಮೂಲಕ ಕೋರಿದ್ದಾರೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!