ನಿಮ್ಮ ಪ್ರೀತಿಗೆ ನಾನು ಸದಾ ಚಿರಋಣಿಯಾಗಿದ್ದು, ನಿಮ್ಮ ಕಷ್ಟಗಳಿಗೆ ನನ್ನ ಮನೆಯ ಬಾಗಿಲು ಎಂದೆಂದಿಗೂ ತೆರೆದಿರುತ್ತದೆ ಎಂದು ಸಮಾಜ ಸೇವಕ, ಉದ್ಯಮಿ ಕದಲೂರು ಉದಯ್ ಭಾವುಕರಾಗಿ ತಿಳಿಸಿದರು.
ಮದ್ದೂರು ತಾಲ್ಲೂಕಿನ ಭಾರತೀನಗರದಲ್ಲಿ ತಮ್ಮ ಜನ್ಮದಿನದ ಪ್ರಯುಕ್ತ ಅಭಿಮಾನಿಗಳು ನೀಡಿದ ಆತ್ಮೀಯ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ತಮ್ಮ ಜನ್ಮ ದಿನವನ್ನು ಈ ರೀತಿ ಆಚರಿಸುತ್ತಿರುವುದಕ್ಕೆ ತುಂಬಾ ಸಂತಸವಾಗುತ್ತಿದೆ. ನಿಮ್ಮ ಸೇವೆಯೇ ನನ್ನ ಸೌಭಾಗ್ಯ. ನಾನು ಮಾಡುತ್ತಿರುವ ಸಮಾಜಮುಖಿ ಸೇವೆಗಳನ್ನು ಕ್ಷೇತ್ರದ ಎಲ್ಲಾ ಭಾಗಗಳಿಗೂ ವಿಸ್ತರಿಸುವ ಆಶಯವಿದೆ. ನಿಮ್ಮ ಕಷ್ಟಗಳಿಗೆ ನನ್ನ ಮನೆಯ ಬಾಗಿಲು ಸದಾ ತೆರೆದಿರುತ್ತದೆ ಎಂದರು.
ಯಾವುದೇ ಸ್ವಾರ್ಥ ಉದ್ದೇಶವಿಲ್ಲದೆ ನನ್ನ ಕ್ಷೇತ್ರದ ಜನರ ಕಷ್ಟಗಳಿಗೆ ನೆರವಾಗಲು ಮನಸ್ಸು ಮಾಡಿದ್ದೇನೆ. ಇಂದು ಈ ಪ್ರಮಾಣದ ಜನರ ಅಭಿಮಾನ, ಅಭಿಮಾನಿಗಳ ಸಂಘವನ್ನು ನಾನು ಕನಸಿನಲ್ಲಿಯೂ ನಿರೀಕ್ಷಿಸಿರಲಿಲ್ಲ. ಇಂದು ನೀವು ತೋರುತ್ತಿರುವ ಅಭಿಮಾನ ನನ್ನ ಜವಾಬ್ದಾರಿಯನ್ನು ಮತ್ತಷ್ಟು ಹೆಚ್ಚಿಸಿದೆ. ಗ್ರಾಮೀಣ ಜನರ ಆರೋಗ್ಯ ಮುಖ್ಯವಾದ ವಿಷಯ, ಹಾಗಾಗಿ ಇಂದು ಬೃಹತ್ ಆರೋಗ್ಯ ಮೇಳ ನಡೆದು ಸಹಸ್ರಾರು ಜನರು ಚಿಕಿತ್ಸೆ ಪಡೆದಿರುವುದು ಸಾರ್ಥಕ ಸಂಗತಿ ಎಂದು ತಿಳಿಸಿದರು.
ಮದ್ದೂರು ಕ್ಷೇತ್ರದ ವಿವಿಧ ಗ್ರಾಮಗಳಿಂದ ಆಗಮಿಸಿದ್ದ ಬೆಂಬಲಿಗರು ಹಾಗೂ ಅಭಿಮಾನಿಗಳು ಹಾರ ತುರಾಯಿ ಹಾಕಿ, ಮೈಸೂರು ಪೇಟ ತೊಡಿಸಿ ಉದಯ್ ಅವರಿಗೆ ಜನ್ಮದಿನದ ಶುಭಾಶಯ ಕೋರಿದರು.
48ನೇ ಜನ್ಮದಿನದ ಪ್ರಯುಕ್ತ ಅವರ ಬೆಂಬಲಿಗರು ತಾಲ್ಲೂಕಿನ ಚಿಕ್ಕರಸಿನಕೆರೆ ಕಾಲಭೈರವೇಶ್ವರ ದೇವಸ್ಥಾನದಲ್ಲಿ ತಮ್ಮ ನಾಯಕನ ಹೆಸರಿನಲ್ಲಿ ಪೂಜೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಸಿಪಾಯಿ ಶ್ರೀನಿವಾಸ್, ತಿಮ್ಮೇಗೌಡ, ಶಿವು , ಯತೀಶ್ ಮಧು, ಅಣ್ಣೂರು ಮನೋಹರ್, ಕರಡಕೆರೆ ಮನು, ಅಣ್ಣೂರು ಹರೀಶ್ , ನಗರಕೆರೆ ಮಹೇಶ್, ಅಣ್ಣೂರು ಸಂದೀಪ್, ಅಜ್ಜಹಳ್ಳಿ ಮನು ಹಾಗೂ ಉದಯ್ ಅವರ ಅಭಿಮಾನಿಗಳು ಭಾಗವಹಿಸಿದ್ದರು