ಮೋದಿಜೀ ಅಧಿಕಾರದಿಂದ ಕೆಳಗಿಳಿಯುವುದು ಗ್ಯಾರಂಟಿ ಎಂದು ವಿರೋಧ ಪಕ್ಷಗಳು ಹೇಳುವುದು ಸಹಜ. ಆದರೆ ಮೋದಿಜೀಯ ಅಪ್ತ ಗೋದಿ ಮೀಡಿಯಾದ ಪಿತಾಮಹ ಜೀ ನ್ಯೂಸ್ ಮಾಲೀಕ ಸುಭಾಷ್ ಚಂದ್ರ ತಮ್ಮ ನಡವಳಿಕೆ ಮೂಲಕ ತೋರಿಸಿದರೆ ನಂಬಲೇ ಬೇಕಾಗುತ್ತೆ.
ಭಾರತದ ನ್ಯೂಸ್ ಚಾನಲ್ ಗಳಲ್ಲಿ ಜೀ ನ್ಯೂಸ್ ಅತ್ಯಂತ ಪ್ರಮುಖವಾದದ್ದು. ಮೋದಿಜೀಯವರನ್ನು ಎತ್ತಿ ಮೆರೆಸಿದ ಚಾನಲ್ ಗಳಲ್ಲಿ ಪ್ರಮುಖವಾದದ್ದು ಸಹ ಹೌದು. ಜೀ ಮಾಲೀಕ ಸುಭಾಷ್ ಚಂದ್ರ ಹಾಗೂ ಮೋದಿ ಅವರ ಗೆಳೆತನ ಮಾಧ್ಯಮ ಲೋಕದಲ್ಲಿ ಎಲ್ಲರಿಗೂ ಗೊತ್ತಿರುವ ವಿಚಾರ. ಮೋದಿಯವರು ತನ್ನ ಬಗ್ಗೆ ಅತಿಯಾದ ಪ್ರಚಾರ ಕೊಟ್ಟ ಗೋದಿ ಮೀಡಿಯಾ ಜೀ ನ್ಯೂಸ್ ಮಾಲೀಕ ಸುಭಾಷ್ ಚಂದ್ರ ಅವರ ಜೀವನ ಚರಿತ್ರೆ ಬಿಡುಗಡೆ ಮಾಡಿದ್ದರೆಂದರೆ, ಅವರಿಬ್ಬರ ಸ್ನೇಹ ಎಂತಹುದೆಂದು ಗೊತ್ತಾಗುತ್ತದೆ.
ಈಗ ಇದೇ ಸುಭಾಷ್ ಚಂದ್ರ ತನ್ನ ನ್ಯೂಸ್ ಗಳಲ್ಲಿ ಮೋದಿ, ಅಮಿತ್ ಷಾ, ಯೋಗಿ ಆದಿತ್ಯನಾಥ್ ಅವರಿಗೆ ಪ್ರಾಮುಖ್ಯತೆ ನೀಡದಂತೆ ನಿರ್ಬಂಧ ವಿಧಿಸಿದ್ದಾನೆ. ಜೊತೆಗೆ ಜೀ ನ್ಯೂಸ್ ಸಿಇಓ ಅಭಯ್ ಓಜಾ ಅವರನ್ನು ಬದಲಾಯಿಸಿ ಅವರ ಜಾಗದಲ್ಲಿ ಲಿಬರಲ್ ವಿಚಾರಧಾರೆಯ ಇದ್ರಿಷ್ ಲೋಯಾ ಅವರನ್ನು ನೇಮಿಸಿದ್ದಾನೆ.
ಜೀ ಟಿವಿ ಮಾಲೀಕರಾದ ಸುಭಾಷ್ ಚಂದ್ರ ಅವರಿಗೆ ಮೋದಿಜೀ ಮನೆಗೆ ಹೋಗುವ ವಿಚಾರ ಸರ್ವೆಗಳ ಮೂಲಕ ಪಕ್ಕಾ ಗೊತ್ತಾಗಿದ್ದು, ಚುನಾವಣೆಯ ಮಧ್ಯದಲ್ಲಿ ಮೋದಿಜೀಗೆ ಕೈ ಕೊಟ್ಟಿದ್ದಾರೆ ಎನ್ನುವ ಸುದ್ದಿ, ಈಗ ಸುದ್ದಿಮನೆಗಳಲ್ಲಿ ಹರಿದಾಡುತ್ತಿವೆ.
ಗೋದಿ ಮೀಡಿಯಾದ ಸುಭಾಷ್ ಚಂದ್ರರ ನಡವಳಿಕೆ ನೋಡಿದರೆ, ಈ ಬಾರಿ ಮೋದಿಯವರ ಅಧಿಕಾರ ಅಂತ್ಯವಾಗಲಿದೆ ಎಂಬುದು ಶತಸಿದ್ಧ ಎಂದು ತಿಳಿದು ಬರುತ್ತಿದೆ.