Friday, September 20, 2024

ಪ್ರಾಯೋಗಿಕ ಆವೃತ್ತಿ

ದೇವೇಗೌಡರನ್ನೇ ಹೊರಗಿಟ್ಟು ಜೆಡಿಎಸ್ ರಾಷ್ಟ್ರೀಯ ಸಮಾವೇಶ ನಡೆಸಲು ಸಿದ್ದತೆ !

ಮುಂಬರುವ ಡಿಸೆಂಬರ್ 9ರಂದು ಬೆಂಗಳೂರಿನಲ್ಲಿ ರಾಷ್ಟ್ರೀಯ ಮಹಾಧಿವೇಶನ ನಡೆಸಲು ಜೆಡಿಎಸ್ ನಾಯಕರು ತೀರ್ಮಾನಿಸಿದ್ದಾರೆ ಎಂದು ಡೆಕನ್ ಹೆರಾಲ್ಡ್.ಕಾಂ ವರದಿ ಮಾಡಿದೆ.

ಈ ಕುರಿತು ಸುದ್ದಿಗೋಷ್ಠಿ ಮಾತನಾಡಿದ ಜೆಡಿಎಸ್ ರಾಷ್ಟ್ರೀಯ ಉಪಾಧ್ಯಕ್ಷ ಸಿ.ಕೆ.ನನು, ”ಒಂದು ವೇಳೆ ಎನ್‌ಡಿಎ ಸೇರ್ಪಡೆಯಾಗುವ ತಮ್ಮನಿರ್ಧಾರವನ್ನು ದೇವೇಗೌಡರು ರದ್ದುಪಡಿಸದಿದ್ದರೆ, ಡಿಸೆಂಬರ್ 9ರಂದು ನಡೆಯಲಿರುವ ರಾಷ್ಟ್ರೀಯ ಮಹಾಧಿವೇಶನದಲ್ಲಿ ಅವರ ನಿರ್ಧಾರವನ್ನು ಔಪಚಾರಿಕವಾಗಿ ತಳ್ಳಿ ಹಾಕಲಾಗುವುದು. ಈ ಕುರಿತು ಏಕಪಕ್ಷೀಯ ನಿರ್ಧಾರ ಕೈಗೊಂಡಿರುವ ದೇವೇಗೌಡರ ವಿರುದ್ಧ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಪಕ್ಷದ ಜಾತ್ಯತೀತ ಸಿದ್ಧಾಂತವನ್ನು ರಕ್ಷಿಸಬೇಕಾದ ಅಗತ್ಯವಿದೆ” ಎಂದು ಹೇಳಿದ್ದಾರೆ.

ಅಧಿವೇಶನಕ್ಕೂ ಮುನ್ನ ಬಿಜೆಪಿಯೊಂದಿಗಿನ ಮೈತ್ರಿಯನ್ನು ಕಡಿದುಕೊಳ್ಳುವಂತೆ ಆಗ್ರಹಿಸುವ ಪತ್ರವೊಂದನ್ನು ದೇವೇಗೌಡರಿಗೆ ಹಸ್ತಾಂತರಿಸಲಾಗುತ್ತದೆ. ಈ ಕುರಿತು ಚರ್ಚಿಸಲು ಕರೆಯಲಾಗಿದ್ದ ಸಭೆಗೆ ಕರ್ನಾಟಕದಿಂದ ಸಿ.ಎಂ.ಇಬ್ರಾಹಿಂ ಸೇರಿದಂತೆ ಒಟ್ಟು 11 ರಾಜ್ಯಗಳ ರಾಜ್ಯಾಧ್ಯಕ್ಷರು ವೈಯಕ್ತಿಕವಾಗಿ ಉಪಸ್ಥಿತರಿದ್ದರು ಹಾಗೂ ನಾಲ್ಕು ಜನ ರಾಜ್ಯಾಧ್ಯಕ್ಷರು ಆನ್ ಲೈನ್ ಮೂಲಕ ಸಭೆಯಲ್ಲಿ ಭಾಗವಹಿಸಿದ್ದರು ಎಂದು ಸಿ.ಕೆ.ನನು ತಿಳಿಸಿದ್ದಾರೆ.

ಈ ಸಭೆಯನ್ನು ತಿರುವನಂಪುರಂನಲ್ಲಿ ಆಯೋಜಿಸಲಾಗಿತ್ತು, ಇದನ್ನು ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ಎಂದು
ಪರಿಗಣಿಸಲಾಗಿದೆ. ಈ ಸಭೆಯು ಕೇವಲ ದೇವೇಗೌಡರ ನಿರ್ಧಾರವನ್ನು ವಿರೋಧಿಸಲು ಸೇರಿದ್ದ ಸಭೆಯಾಗಿತ್ತು ಎಂದು ಸಿ.ಕೆ.ನನು ಸ್ಪಷ್ಟಪಡಿಸಿದ್ದಾರೆ.

ಈ ನಡುವೆ, ಕೇರಳದ ಜೆಡಿಎಸ್ ರಾಜ್ಯಾಧ್ಯಕ್ಷ ಮ್ಯಾಥ್ಯ ಟಿ. ಥಾಮಸ್ ಈ ಸಭೆಯಿಂದ ದೂರ ಉಳಿದರಲ್ಲದೆ, ತಮ್ಮ ರಾಜ್ಯದ ಪಕ್ಷದ ಪದಾಧಿಕಾರಿಗಳಿಗೂ ಈ ಸಭೆಗೆ ಹಾಜರಾಗದಂತೆ ಸೂಚಿಸಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!