ವರದಿ : ಪ್ರಭು ವಿ.ಎಸ್.
ಮದ್ದೂರು ಪುರಸಭಾ ಸದಸ್ಯೆ ಪ್ರಿಯಾಂಕ ಅಪ್ಪುಗೌಡರವರನ್ನು ಮದ್ದೂರು ತಾಲ್ಲೂಕು ಮಹಿಳಾ ಕಾಂಗ್ರೆಸ್ ಅಧ್ಯಕ್ಷೆಯನ್ನಾಗಿ ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ. ಗುರುವಾರ ಆದೇಶ ಪ್ರತಿಯನ್ನು ಕೆಪಿಸಿಸಿ ಸದಸ್ಯರಾದ ಗುರುಚರಣ್ ರವರು ಪ್ರಿಯಾಂಕ ಅಪ್ಪುಗೌಡರವರಿಗೆ ನೀಡಿದರು.
ಕಾಂಗ್ರೆಸ್ ನಾಯಕ ಗುರುಚರಣ್ ಮಾತನಾಡಿ, ಮದ್ದೂರು ಪುರಸಭಾ ಸದಸ್ಯರಾದ ಪ್ರಿಯಾಂಕ ಅಪ್ಪುಗೌಡರು ತಾಲ್ಲೂಕಿನಲ್ಲಿ ಸಂಘಟನೆ, ಹೋರಾಟದ ಮೂಲಕ ಗುರುತಿಸಿಕೊಂಡಿದ್ದಾರೆ. ಪುರಸಭೆ ಸದಸ್ಯರಾಗಿ ಜನಪರ ಕೆಲಸಗಳ ಮೂಲಕ ಜನಾನುರಾಗಿಯಾಗಿರುವ ಅವರು ತಾಲ್ಲೂಕಿನಲ್ಲಿ ಕಾಂಗ್ರೆಸ್ ಪಕ್ಷ ಸಂಘಟಿಸಲಿ ಎಂದು ಶುಭ ಕೋರಿದರು.
ಈ ಸಂದರ್ಭದಲ್ಲಿ ಡಿಸಿಸಿ ಬ್ಯಾಂಕ್ ನಿರ್ದೇಶಕ ಸಂದರ್ಶ, ಟಿಎಪಿಸಿಎಂಎಸ್ ಉಪಾಧ್ಯಕ್ಷ ರಾಘವ, ಯೂತ್ ಕಾಂಗ್ರೆಸ್ ಅಧ್ಯಕ್ಷ ಕಿರಣ್, ಮುಖಂಡರಾದ ಅಪ್ಪು ಪಿ.ಗೌಡ, ಪ್ರಶಾಂತ್, ಮಹೇಶ್, ಪುನೀತ್, ರಾಮಚಂದ್ರು, ಅಂಬರೀಶ್, ಪುರುಷೋತ್ತಮ್, ಆಸಿಫ್ ಪಾಷಾ ಮತ್ತಿತರರಿದ್ದರು.