Saturday, October 19, 2024

ಪ್ರಾಯೋಗಿಕ ಆವೃತ್ತಿ

ಕಾರಸವಾಡಿ ಮಹದೇವು ಅವರ ಪುತ್ರ ದುರ್ಮರಣ


  • ಕೆರೆಯಲ್ಲಿ ಈಜಲು ಹೋಗಿ ಸಾವನನ್ಪಪ್ಪಿದ ಯುವಕ 

  • ಮದ್ದೂರು ತಾಲೂಕಿನ ಕೊಪ್ಪ ಕೆರೆಯಲ್ಲಿ ನಡೆದ ದುರಂತ

    ಮದ್ದೂರು ತಾಲೂಕಿನ ಕೊಪ್ಪ ಕೆರೆಯಲ್ಲಿ ಈಜಲು ಹೋಗಿದ್ದ ಯುವಕನೊಬ್ಬ ಸಾವನ್ನಪ್ಪಿರುವ ಘಟನೆ ಇಂದು ಮಧ್ಯಾಹ್ನ ನಡೆದಿದೆ.

    ಮಂಡ್ಯ ತಾಲ್ಲೂಕಿನ ಕಾರಸವಾಡಿ ಗ್ರಾಮದ ಹರ್ಷ.ಕೆ.ಎಂ.(18) ಮೃತ ಯುವಕ.

    ಮಂಡ್ಯ ತಾಲೂಕಿನ ಕಾರಸವಾಡಿ ಗ್ರಾಮದ ಹರ್ಷ ರಾಜ್ಯ ಯುವ ಪ್ರಶಸ್ತಿ ಪುರಸ್ಕೃತ ಕಾರಸವಾಡಿ ಮಹದೇವ್

    ಅವರ ಪುತ್ರ.

    ಮಂಡ್ಯ ನಗರದ ಕಾಲೇಜಿನಲ್ಲಿ ಬಿ.ಕಾಂ.ವ್ಯಾಸಂಗ ಮಾಡುತ್ತಿದ್ದ ಹರ್ಷ ಇಂದು ದೀಪಾವಳಿ ಹಬ್ಬದ ಪ್ರಯುಕ್ತ ರಜಾ ಇರುವ ಹಿನ್ನೆಲೆಯಲ್ಲಿ ತನ್ನ ಮೂವರು ಸ್ನೇಹಿತರ ಜೊತೆ ಕೊಪ್ಪ ಕೆರೆಯಲ್ಲಿ ಈಜಲು ಹೋಗಿದ್ದರು.

    ಕೊಪ್ಪ ಕೆರೆಯಲ್ಲಿ ಈಜುತ್ತಿದ್ದ ಸಂದರ್ಭದಲ್ಲಿ ತೂಬಿನ ಬಳಿ ತೆರಳಿದಾಗ ನೀರಿನ ಸೆಳೆತಕ್ಕೆ ಸಿಲುಕಿ ತೂಬಿನಿಂದ ನಾಲೆಗೆ ಬಿದ್ದ ಪರಿಣಾಮ ತೀವ್ರ ಪೆಟ್ಟಾಗಿ ಹರ್ಷ ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ.

    ಕೊಪ್ಪ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಹರ್ಷನ ಮೃತದೇಹವನ್ನು ಮಿಮ್ಸ್ ಶವಾಗಾರಕ್ಕೆ ತರಲಾಗಿದೆ.

    ಸಂತಾಪ : ಕಾರಸವಾಡಿ ಮಹೇದೇವು ಅವರ ಪುತ್ರ ಹರ್ಷ ಅವರ ನಿಧನಕ್ಕೆ ಕರ್ನಾಟಕ ಜಾನಪದ ಪರಿಷತ್ ಮಂಡ್ಯ ತಾಲ್ಲೂಕು ಘಟಕ ಸಂತಾಪ ವ್ಯಕ್ತಪಡಿಸಿದೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!