ಕೋಲಕಾರನದೊಡ್ಡಿ ಶ್ರೀಶನೇಶ್ವರಸ್ವಾಮಿ ದೇವಾಲಯದಲ್ಲಿ ಸೋಮವಾರದಿಂದ ಕಾರ್ತಿಕ ಉತ್ಸವ ಪೂಜೆಯು ಜರುಗಲಿದೆ.
ಮಂಡ್ಯ ತಾಲ್ಲೂಕಿನ ಕೋಲಕಾರನದೊಡ್ಡಿ ಬಳಿಯ ಶ್ರೀಶನೇಶ್ವರಸ್ವಾಮಿ ಹಾಗೂ ಗಜಲಕ್ಷ್ಮೀ ದೇವಸ್ಥಾನದಲ್ಲಿ ಅ.31, ನ.7, 14 ಹಾಗೂ 21ರ ಸೋಮವಾರದಂದು ಕಾರ್ತಿಕ ದೀಪೋತ್ಸವ ಕಾರ್ಯಕ್ರಮ ಜರುಗಲಿದೆ ಎಂದು ಪ್ರಧಾನ ಅರ್ಚಕ ಕೆ.ಸಿ.ಯೋಗೇಶ್ ಕುಮಾರ್ ತಿಳಿಸಿದ್ದಾರೆ.
ಶ್ರೀಕ್ಷೇತ್ರದಲ್ಲಿ ಕಾರ್ತಿಕ ಮಾಸದ ವಿಶೇಷ ದೀಪೋತ್ಸವ ಹಾಗೂ ವಿವಿಧ ಅಭಿಷೇಕಗಳು ನಡೆಯಲಿದೆ. ಕಾರ್ತಿಕ ಸೋಮವಾರದಂದು ಸಂಜೆ 4.30 ರಿಂದಲೇ ಭಕ್ತಾದಿಗಳಿಂದ ಜ್ಯೋತಿ ಬೆಳಗಿಸುವ ಕಾರ್ಯಕ್ರಮವಿದ್ದು, ಬಳಿಕ ಅನ್ನಸಂತರ್ಪಣೆ ನಡೆಯುತ್ತದೆಂದು ತಿಳಿಸಿದ್ದಾರೆ.