Friday, September 20, 2024

ಪ್ರಾಯೋಗಿಕ ಆವೃತ್ತಿ

ಸರ್ಕಾರ ಬೀಳಿಸಲು ಕರೆದುಕೊಂಡು ಹೋಗಿದ್ದು ನಾವು… ಕಳಿಸಿದ್ದು ಯಾರು ? ; ಆರ್. ಅಶೋಕ್

ಕುಮಾರಸ್ವಾಮಿ ಸರ್ಕಾರ ಬೀಳಿಸಿದ್ದು ಬಿಜೆಪಿ ಎಂದು ಟೀಕೆ ಮಾಡುತ್ತಿದ್ದಾರೆ, ಅಂದು ಕರೆದುಕೊಂಡು ಹೋಗಿದ್ದು ನಾವಾದರೆ ಪ್ಲಾನ್ ಮಾಡಿ ಕಳಿಸಿದ್ದು ಯಾರು ? ಎಂದು ವಿಪಕ್ಷ ನಾಯಕ ಆರ್ ಅಶೋಕ್ ಪ್ರಶ್ನಿಸಿದರು.

ಮಂಡ್ಯನಗರದ ಹೊರವಲಯದ ಖಾಸಗಿ ಹೋಟೆಲ್‌ನಲ್ಲಿ ಶುಕ್ರವಾರ ಆಯೋಜಿಸಿದ್ದ ಜೆಡಿಎಸ್ ಮತ್ತು ಬಿಜೆಪಿ ಕಾರ್ಯಕರ್ತರು ಹಾಗೂ ಮುಖಂಡರ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಆದಿಚುಂಚನಗಿರಿ ಮಠಕ್ಕೆ ನಾವು ಹೋಗಿದ್ದನ್ನೇ ದೊಡ್ಡದಾಗಿ ಚರ್ಚೆ ಮಾಡುತಿದ್ದಾರೆ. ಕಾಂಗ್ರೆಸ್‌ನವರು ಮಠಕ್ಕೆ ಹೋಗಿದ್ದರೂ ಏನು ಆಗಲಿಲ್ಲವೇ ಎಂದು ವ್ಯಂಗವಾಡಿದರು.

ರಾಜ್ಯದಲ್ಲಿ ಲಿಂಗಾಯತ ಸಮುದಾಯ ಬಿಟ್ಟರೇ ಒಕ್ಕಲಿಗರೆ ಹೆಚ್ಚಿದ್ದಾರೆ. ಆದರೆ ಇಂದು ಒಕ್ಕಲಿಗ ಸಮಾಜ ಜನಸಂಖ್ಯೆಯಲ್ಲಿ ಆರನೇ ಸ್ಥಾನದಲ್ಲಿದ್ದೇವೆ. ಈ ಜಾತಿಗಣತಿ ವರದಿಯನ್ನು ಬರೆಸಿದವರೇ ಮುಖ್ಯಮಂತ್ರಿ ಸಿದ್ದರಾಮಯ್ಯ ಎಂದು ದೂರಿದರು.

ನಿಖಿಲ್ ಸೋಲಿಸಿದ್ದ ನಾವೇ ಎಂದು ಸಿದ್ದರಾಮಯ್ಯ ಕೂಡ ಭಾಷಣ ಮಾಡಿದ್ದಾರೆ. ಜೆಡಿಎಸ್, ಕುಮಾರಸ್ವಾಮಿ ಬೆನ್ನಿಗೆ ಚೂರಿ ಹಾಕಿದವರು ಕಾಂಗ್ರೆಸ್. ದೇವೇಗೌಡರು ಪ್ರಧಾನಿಯಾಗಿದ್ದಾಗ ಚೂರಿ ಹಾಕಿದ ಕಾಂಗ್ರೆಸ್ ದೇಶಕ್ಕೆ ಮಾರಕ ಆ ಪಕ್ಷ ಗೆದ್ದರೇ ಭ್ರಷ್ಟಚಾರಿಗಳಿಗೆ ರಕ್ಷಣೆ ಸಿಗಲಿದೆ. ಕೇಜಿವಾಲ್ ಜೈಲಿಗೆ ಹೋಗಾಯ್ತು ನರೇಂದ್ರ ಮೋದಿಗೆ ರಾಹುಲ್ ಪ್ರತಿಸ್ಪರ್ಧಿ ಎಂತಲೂ ಹೇಳುತ್ತಿಲ್ಲ ರಾಹುಲ್ನನ್ನ ಇನ್ನೂ ಪಾಪು ಎಂದೇ ಭಾವಿಸಿದ್ದಾರೆ ಎಂದರು.

ಏ.14ರಂದು ಮೈಸೂರಿನಲ್ಲಿ ಪ್ರಧಾನಮಂತ್ರಿ ನರೇಂದ್ರಮೋದಿ ಅವರ ಬೃಹತ್ ಸಭೆ ಇದೆ. ಆ ಸಭೆ ಮೂಲಕ ಇಡೀ ದೇಶದಲ್ಲಿ ಅಲೆ ಸೃಷ್ಟಿಯಾಗಬೇಕು. ಅದಕ್ಕಾಗಿ ಮಂಡ್ಯದಲ್ಲಿ ಸಭೆ ಕರೆದಿದ್ದೇವೆ ಬಿಜೆಪಿ ಜತೆ ಜೆಡಿಎಸ್ ಕೂಡ ಸೇರಿಕೊಂಡಿದೆ. ಒಂದೇ ವೇದಿಕೆಯಲ್ಲಿ ಪ್ರಧಾನಿ ಮೋದಿ ಹಾಗೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಭಾಗಿಯಾಗುತ್ತಿದ್ದಾರೆ ಎಂದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!