ಮಂಡ್ಯ ಸರ್ಕಾರಿ ಆಸ್ಪತ್ರೆಯ ಮುಂಭಾಗ ಇತ್ತಿಚೇಗೆ ಕ್ಷುಲ್ಲಕ ಕಾರಣಕ್ಕಾಗಿ ಆಟೋ ಚಾಲಕನ ಮೇಲೆ ಹಲ್ಲೆ ಮಾಡಿದ್ದ ಪೊಲೀಸ್ ಪೇದೆಯನ್ನು ಅಮಾನತು ಮಾಡಲಾಗಿದೆ ಎಂದು ಮಂಡ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್ ತಿಳಿಸಿದ್ದಾರೆ.
30/05/2023ರ ಬೆಳಿಗ್ಗೆ 11:45ರ ಸುಮಾರಿಗೆ ಮಂಡ್ಯ ಸರಕಾರಿ ಆಸ್ಪತ್ರೆಯ ಮುಂದೆ ಪೋಲಿಸ್ ಪೇದೆಯೊಬ್ಬ ಆಟೋ ಡ್ರೈವರ್ಗೆ ಸಾರ್ವಜನಿಕವಾಗಿ ಎಲ್ಲರ ಮುಂದೆ ಹೊಡೆಯುತ್ತಾ ಇದ್ದಾಗ, ಪೋಲಿಸ್ ಇನ್ಸ್ಪೆಕ್ಟರ್ ಒಬ್ಬರು ಕೂಡ ಇದ್ದರು? ಪೋಲೀಸರ ಕೆಲಸ ಕೇಸ್ ಮಾಡಿ ಶಕ್ಷೆ ಕೊಡಿಸೋದ ಇಲ್ಲವೇ ಇವರೇ ಶಿಕ್ಷೆ ಕೊಡೋದಾ? @siddaramaiah @DKShivakumar pic.twitter.com/klhdLujGgD
— ದಡಿಗ ಗಂಗವಾಡಿ | Ganga Dynasty (@dadigagangawadi) May 31, 2023
“>
ಪೋಲಿಸ್ ಪೇದೆಯೊಬ್ಬ ಸಾರ್ವಜನಿಕವಾಗಿ ಎಲ್ಲರ ಮುಂದೆ ಹಲ್ಲೆ ಮಾಡಿದ್ದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು, ಕೆಲವರು ಟ್ವೀಟರ್ ಮೂಲಕ ಮಂಡ್ಯ ಎಸ್ಪಿ ಹಾಗೂ ಪೊಲೀಸ್ ಇಲಾಖೆ ಹಿರಿಯ ಅಧಿಕಾರಿಗಳ ಗಮನಕ್ಕೆ ಈ ಕೃತ್ಯವನ್ನು ತಂದು ಕ್ರಮಕ್ಕೆ ಆಗ್ರಹಿಸಿದ್ದರು.
The Constable in question has been placed under suspension and departmental action has been initiated
Any such inappropriate behaviour will be severely dealt with
Politeness is the minimum thing Public expects from Policemen https://t.co/3aLpE1ydJx
— alok kumar (@alokkumar6994) May 31, 2023
ಇದಕ್ಕೆ ಪ್ರತಿಕ್ರಿಯಿಸಿರುವ ಎಡಿಜಿಪಿ ಅಲೋಕ್ ಕುಮಾರ್, ಇಲಾಖಾ ವಿಚಾರಣೆಯನ್ನು ಕಾಯ್ದಿರಿಸಿ ಪೇದೆಯನ್ನು ಅಮಾನತುಗೊಳಿಸಲಾಗಿದೆ. ಇಂತಹ ಅನುಚಿತ ವರ್ತನೆಯನ್ನು ಸಹಿಸುವುದಿಲ್ಲ. ಸಭ್ಯತೆಯೇ ಸಾರ್ವಜನಿಕರು ಪೊಲೀಸರಿಂದ ನಿರೀಕ್ಷಿಸುವ ಕನಿಷ್ಠ ವಿಷಯವಾಗಿದೆ ಎಂದು ಅವರು ಪ್ರತಿಕ್ರಿಯಿಸಿದ್ದಾರೆ.
ಸದರಿ ಪೊಲೀಸ್ ಪೇದೆಯನ್ನು ವಿಚಾರಣೆ ಬಾಕಿ ಇರಿಸಿ ಅಮಾನತ್ತಿನಲ್ಲಿಡಲಾಗಿದೆ.
This incident has been viewed seriously and the police constable has been placed under suspension pending enquiry.
— SP Mandya (@MandyaPolice) May 31, 2023
“>
ಪೇದೆಯು ಆಟೋ ಚಾಲಕನ ಮೇಲೆ ಹಲ್ಲೆ ನಡೆಸುವಾಗ ಸ್ಥಳದಲ್ಲೇ ಪೊಲೀಸ್ ಇನ್ಸ್ಪೆಕ್ಟರ್ ಜೊತೆಯಲ್ಲೇ ಇದ್ದರು.
ಆದ್ದರಿಂದ ಅವರ ವಿರುದ್ಧವು ಕಾನೂನು ಕ್ರಮ ಜರುಗಿಸಬೇಕೆಂದು ಪ್ರತ್ಯಕ್ಷದರ್ಶಿಗಳು ದೂರಿದ್ದಾರೆ.