✍️ ಶಿವಸುಂದರ್
ಕೊಳೆತ ಕತ್ತಲಿಗೆ
ಸೂರ್ಯ ನೆಂದು
ಹೆಸರಿಟ್ಟರೆ
ಬೆಳಕು ನೀಡುವುದುಂಟೆ?
ಮಣ್ಣು ದೇಶವೆನ್ನುವರಿಗೆ
ಮನುಷ್ಯರು
ದೇಶವಾಗುವುದುಂಟೆ?
ಒಡೆದುಣ್ಣುವವರು
ದುಡಿದುಣ್ಣುವರ ಸಂಕಟವ
ಅರಿವುದುಂಟೆ?
ಆದಾನಿಗಳಿಗೆ
ಋಣಿಗಳಾದವರು
ಅನ್ನದಾತರ
ಮಕ್ಕಳಾಗುವುದುಂಟೆ?
ಹೇಲ್ನೊಣಕ್ಕೆ
ಹಾಲೆರೆದರೆ
ಹೇಲುತಿನ್ನುವುದ
ಬಿಡುವುದುಂಟೆ?
ಹರಿತ ಕೊಡಲಿಯ
ಹೊಳಪಿಗೆ
ಬೆರಗಾಗುವ ಕುರಿಗಳು
ಬದುಕಿದ್ದುಂಟೆ?
ಬುಲ್ಡೋಜರಿನ
ಭವ್ಯತೆಯನ್ನು
ಭಜಿಸುವ ದೇಶಕ್ಕೆ
ಭವಿಷ್ಯ ವುಂಟೇ?