Thursday, September 19, 2024

ಪ್ರಾಯೋಗಿಕ ಆವೃತ್ತಿ

ಸಂಕ್ರಾಂತಿ ಉಡುಗೊರೆ : ಮುಂಜಾನೆಯೇ ಮತದಾರರ ಮನೆಬಾಗಿಲಿಗೆ – ಉದಯ್

ಮದ್ದೂರು ವಿಧಾನಸಭಾ ಕ್ಣೇತ್ರದ ಚುನಾವಣೆ ಭರಾಟೆ ಜೊರಾಗಿದೆ. ಸಂಕ್ರಾತಿ ಹಬ್ಬದ ಉಡುಗೊರೆಯಾಗಿ ಕದಲೂರು ಉದಯ್ ಅವರು ತಮ್ಮ ಟ್ರಸ್ಟ್ ವತಿಯಿಂದ ಕ್ಷೇತ್ರದ ಪ್ರತಿ ಮನೆಗೆ ಬಾಗಿನ ಹಾಗೂ ಮಹಿಳಾ ಮತದಾರರಿಗೆ ಸಂಕ್ರಾಂತಿ ಉಡುಗೊರೆಯಾಗಿ ಬಾಗಿನ ಹಾಗೂ ಸೀರೆ ವಿತರಣೆ ಮಾಡುತ್ತಿದ್ದಾರೆ.

ಇಂದು ಮುಂಜಾನೆ ಆರು ಘಂಟೆಗೆ ಬಾಗಿನ ಹಂಚಿಕೆಗೆ ಹಳ್ಳಿಗೆ ಬಂದು, ಮನೆ ಮನೆಗೆ ದಂಪತಿ‌ಸಮೇತ ಭೇಟಿ ನೀಡಿ ಉಡುಗೊರೆ ನೀಡುತ್ತಿದ್ದಾರೆ.

ಒಟ್ಟು ಹನ್ನೊಂದು ಗ್ರಾ. ಪಂ. ಗಳಲ್ಲಿ ಈ ದಿನ ಉಡುಗೊರೆ ಹಂಚಿಕೆ ಇದ್ದು, ನಾಳೆ ಮತ್ತು ನಾಳಿದ್ದು ಮದ್ದೂರು ಕ್ಷೇತ್ರ ಪೂರ್ಣ ಉಡುಗೊರೆ ನೀಡುವ ಯೊಜನೆಯನ್ನು ಟ್ರಸ್ಟ್ ಹಮ್ಮಿಕ್ಕೊಂಡಿದೆ ಎಂದು ಟ್ರಸ್ಟ್ ಪ್ರಕಟಣೆ ತಿಳಿಸಿದೆ.

ನವಿಲೆ ಗ್ರಾಮದಲ್ಲಿ ಈ ಹಂಚಿಕೆ ಕಾರ್ಯಕ್ರಮ ನಡೆದಿದೆ.

ವಿವಿದೆಡೆ ಅವರ ಅಭಿಮಾನಿಗಳು ಉಡುಗೊರೆ ವಿತರಣೆ ಹಮ್ಮಿಕ್ಕೊಡಿದ್ದಾರೆ. ಬೆಳಿಗ್ಗೆ ಮತ್ತು ಸಂಜೆ ಈ ಉಡುಗೊರೆ ನೀಡುವ ಪ್ರಕ್ರಿಯೆ ನಡೆಯುವುದಾಗಿ ಉದಯ್ ಅಭಿಮಾನಿ ಬಳಗದ ಯರಗನಹಳ್ಲಿ ಮಹಾಲಿಂಗು ತಿಳಿಸಿದ್ದಾರೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!