ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಪಡಿತರ ಚೀಟಿ ತಿದ್ದುಪಡಿ ಮತ್ತು ಹೊಸ ಸದಸ್ಯರ ಸೇರ್ಪಡೆಗೆ ಅವಕಾಶ ಕಲ್ಪಿಸಿದೆ, ಆದರೆ ಇಲಾಖೆಯ ಸರ್ವರ್ ದೋಷದಿಂದ ಸಾರ್ವಜನಿಕರು ಪರದಾಡುವಂತಾಗಿದೆ.
ಮಳವಳ್ಳಿ ತಾಲೂಕಿನಲ್ಲಿ ಇಂದಿನಿಂದ ಮೂರು ದಿನ ಬಿಪಿಎಲ್ ಪಡಿತರ ಚೀಟಿಗೆ ಸೇರ್ಪಡೆ ಮತ್ತು ತಿದ್ದುಪಡಿ ಅವಕಾಶ ನೀಡಲಾಗಿದ್ದು, ಬೆಳಿಗ್ಗೆಯಿಂದಲೇ ಆಹಾರ ಇಲಾಖೆಯ ಸರ್ವರ್ ಕೈಕೊಟ್ಟಿದ್ದರಿಂದ ಸಾರ್ವಜನಿಕರು ಆಹಾರ ಇಲಾಖೆ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.
ಗ್ರಾಹಕ ಗಿರೀಶ್ ಮಾತನಾಡಿ, ಮೊದಲು ಸರ್ಕಾರ ಹತ್ತು ದಿನ ಕಾಲಾಕಾಶ ನೀಡಿತ್ತು. ಈಗ ಬರಿ ಮೂರು ದಿನ ಅವಕಾಶ ನೀಡಿದೆ. ಅದರಲ್ಲಿ ಆಹಾರ ಇಲಾಖೆ ಸರ್ವರ್ ದೋಷದಿಂದ ಸಾರ್ವಜನಿಕರು ತನ್ನ ಕೆಲಸ ಕಾರ್ಯಗಳನ್ನು ಮತ್ತು ದುಡಿಮೆಗಳನ್ನು ಬಿಟ್ಟು ಬಂದು ಕೆಲವು ಸೈಬರ್ ಸೆಂಟರ್ ಗಳ ಮುಂದೆ ಅಲೆದಾಡುವ ಪರಿಸ್ಥಿತಿ ಉಂಟಾಗಿದೆ. ಆದ್ದರಿಂದ ಸಂಬಂಧಪಟ್ಟ ಇಲಾಖೆ ಮತ್ತು ಸರ್ಕಾರ ಇದಕ್ಕೆ ಪರಿಹಾರ ನೀಡಿ ಪರದಾಡುವ ಪರಿಸ್ಥಿತಿಯನ್ನು ನಿಲ್ಲಿಸಬೇಕೆಂದು ಒತ್ತಾಯಿಸಿದರು.