ರಾಜ್ಯದಲ್ಲಿ ಜೆಡಿಎಸ್ ಪಕ್ಷಕ್ಕೆ ಸಂಪೂರ್ಣ ಬಹುಮತ ನೀಡಿದರೆ ಎಚ್.ಡಿ.ಕುಮಾರಸ್ವಾಮಿ ಅವರು ಸುವರ್ಣಾಕ್ಷರದಲ್ಲಿ ಬರೆದಿಡುವಂತಹ ಆಡಳಿತ ನೀಡಲಿದ್ದಾರೆ ಎಂದು ಪುರಸಭಾ ಸದಸ್ಯ ಬಸ್ ಸಂತೋಷ್ಕುಮಾರ್ ಹೇಳಿದರು.
ಕೆ.ಆರ್.ಪೇಟೆ ಪಟ್ಟಣದಲ್ಲಿ ನಿರ್ಮಿಸಿರುವ ಜೆಡಿಎಸ್ ಪಕ್ಷದ ನೂತನ ಕಚೇರಿ ಉದ್ಘಾಟನಾ ಕಾರ್ಯಕ್ರಮವನ್ನು ರೈತರಿಗೆ 4 ಸಾವಿರ ತೆಂಗಿನ ಸಸಿಗಳ ವಿತರಣೆ ಮಾಡುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ದೇಶಾದ್ಯಂತ ವಿವಿಧ ರಾಜ್ಯಗಳಲ್ಲಿ ಪ್ರಾದೇಶಿಕ ಪಕ್ಷಗಳು ಸ್ವತಂತ್ರವಾಗಿ ಉತ್ತಮ ಆಡಳಿತ ನೀಡುತ್ತಿವೆ. ಆದರೆ ರಾಜ್ಯದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ದೆಹಲಿಯ ವರಿಷ್ಠರ ತೀರ್ಮಾನದಂತೆ ಕರ್ನಾಟಕದ ಜನತೆಗೆ ಕಾರ್ಯಕ್ರಮ ರೂಪಿಸುತ್ತವೆ. ಆದರೆ ಜೆಡಿಎಸ್ ಅಧಿಕಾರಕ್ಕೆ ಬಂದರೆ ನಾಡಿನ 7ಕೋಟಿ ಜನರ ತೀರ್ಮಾನದಂತೆ ಆಡಳಿತ ನಡೆಸಲು ನಮ್ಮ ಪಕ್ಷದ ವರಿಷ್ಠರಾದ ದೇವೇಗೌಡ ಅಪ್ಪಾಜಿ ಮತ್ತು ಕುಮಾರಣ್ಣ ಅವರು ಸದಾ ಸಿದ್ದರಾಗಿದ್ದಾರೆ ಎಂದರು.
ನೆಲ, ಜಲ, ಭಾಷೆಗೆ ದಕ್ಕೆಯಾದರೆ ಎಂತಹ ಹೋರಾಟಕ್ಕೂ ಜೆಡಿಎಸ್ ಪಕ್ಷವು ಸದಾ ಸಿದ್ದವಾಗಿರುತ್ತದೆ.ಕುಮಾರಸ್ವಾಮಿ ಅವರ ಆದೇಶದಂತೆ ನಮ್ಮ ತಾಲೂಕಿನ 10ಸಾವಿರ ಮನೆಗಳಿಗೆ ನಾವು ಕನ್ನಡ ಬಾವುಟವನ್ನು ವಿತರಣೆ ಮಾಡಿದ್ದೇವೆ ಎಂದರು.
ಮುಂಬರುವ ಚುನಾವಣೆಯಲ್ಲಿ ವರಿಷ್ಠರು ಯಾರಿಗಾದರೂ ಟಿಕೆಟ್ ನೀಡಲಿ, ಜೆಡಿಎಸ್ ಅಭ್ಯರ್ಥಿಯನ್ನು ಗೆಲ್ಲಿಸುವುದೇ ನಮ್ಮ ಮುಖ್ಯ ಧ್ಯೇಯ ಎಂದರು.
ಜೆಡಿಎಸ್ ಮುಖಂಡರಾದ ವಿಠಲಾಪುರ ಸುಬ್ಬೇಗೌಡ, ಗದ್ದೆಹೊಸೂರು ದರ್ಶನ್, ಐಪನಹಳ್ಳಿ ಸಿದ್ದೇಗೌಡ, ಗ್ರಾ.ಪಂ.ಮಾಜಿ ಅಧ್ಯಕ್ಷ ಹರಿಹರಪುರ ಮೋಹನ್, ಸಾರಂಗಿ ವಿಶ್ವನಾಥ್, ಬಂಡಿಹೊಳೆ ದರ್ಶನ್, ವಿಶ್ವನಾಥ್, ಹೊಸಹೊಳಲು ಅರ್ಜುನ್, ಕತ್ತರಘಟ್ಟ ಮಹೇಶ್, ದೊಡ್ಡಗಾಡಿನಹಳ್ಳಿ ಡಿ.ಪಿ.ಲೋಕೇಶ್, ಜಿಲ್ಲಾ ಸಹಕಾರ ಯೂನಿಯನ್ ನಿರ್ದೇಶಕ ಮಂದಗೆರೆ ಮುರುಳಿ ಸೇರಿದಂತೆ ಸಾವಿರಾರು ಜೆಡಿಎಸ್ ಕಾರ್ಯಕರ್ತರು ಭಾಗವಹಿಸಿದ್ದರು.