Friday, September 20, 2024

ಪ್ರಾಯೋಗಿಕ ಆವೃತ್ತಿ

ಮಂಡ್ಯ| ಸಂಪ್ರೀತ್ ಸಂತೋಷ್ ಗೆ ಯುಪಿಎಸ್ಸಿಯಲ್ಲಿ 868ನೇ ರ್‍ಯಾಂಕ್

ಯುಪಿಎಸ್ ಸಿ ನಡೆಸಿದ ಐಎಎಸ್ ಪರೀಕ್ಷೆಯಲ್ಲಿ ಮಂಡ್ಯನಗರದ ಸಂಪ್ರೀತ್ ಸಂತೋಷ್ 868 ನೇ ರ್‍ಯಾಂಕ್ ಪಡೆಯುವ ಮೂಲಕ ಜಿಲ್ಲೆಗೆ ಕೀರ್ತಿ ತಂದಿದ್ದಾರೆ

ಮೂಲತಃ ಮಂಡ್ಯ ನಗರದ ಗಾಂಧಿ ನಗರದಲ್ಲಿ ನಿವಾಸಿಯಾಗಿರುವ ಸಂಪ್ರೀತ್ ಸಂತೋಷ್ ಅವರ ತಂದೆ ಎಸ್ ಹೆಚ್ ಸಂತೋಷ್ ಕುಮಾರ್ ಸಹಕಾರ ಇಲಾಖೆಯಲ್ಲಿ ಜಂಟಿ ನಿಬಂಧಕರಾಗಿ ಕಾರ್ಯ ನಿರ್ವಹಿಸಿ ನಿವೃತ್ತರಾಗಿದ್ದಾರೆ.

ಸಂಪ್ರೀತ್ ಸಂತೋಷ್ ಪ್ರಾಥಮಿಕ ಶಿಕ್ಷಣವನ್ನು ಅಭಿನವ ಭಾರತಿ ವಿದ್ಯಾ ಕೇಂದ್ರಲ್ಲಿ ಮುಗಿಸಿ ನಂತರ ಪ್ರೌಢ ಶಿಕ್ಷಣವನ್ನು ಹಾಗೂ ಬೆಂಗಳೂರಿನ ಕಾರ್ಮೆಲ್ ಕಾನ್ವೆಂಟ್ ನಲ್ಲಿ ಹಾಗೂ ಇಂಜಿನಿಯರಿಂಗ್ ಮೆಕನಿಕಲ್ ಪದವಿಯನ್ನು PESIT ನಲ್ಲಿ ಮುಗಿಸಿದ್ದರು. ನಂತರ UPSC ಪರೀಕ್ಷೆಯಲ್ಲಿ ಮೂರು ಬಾರಿ ನೇರ ಸಂದರ್ಶನದಲ್ಲಿ ಭಾಗಿಯಾಗಿ ವಿಫಲವಾಗಿ, ನಂತರ ನಾಲ್ಕನೇ ಬಾರಿಗೆ 868 ರ್‍ಯಾಂಕ್ ಪಡೆಯಲು ಯಶಸ್ವಿಯಾಗಿದ್ದಾರೆಂದು KPCC ರಾಜ್ಯ ಸಂಚಾಲಕ ದೀಪಕ್ ಕೆ ಎನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!