ಬೈಕ್’ಗೆ ಪೆಟ್ರೋಲ್ ಹಾಕಿಸಲು ಬಂದ ಗ್ರಾಹಕನೋರ್ವ ಕ್ಷುಲ್ಲಕ ಕಾರಣಕ್ಕೆ ಮಹಿಳಾ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿರುವ ಘಟನೆ ಮಂಡ್ಯ ತಾಲ್ಲೂಕಿನ ಕೊತ್ತತ್ತಿ ಗ್ರಾಮದಲ್ಲಿ ಗುರುವಾರ ಮಧ್ಯಾಹ್ನ 4 ಗಂಟೆಯಲ್ಲಿ ಜರುಗಿದೆ.
ಗ್ರಾಮದ ನೇಹಾ ಇಂಡಿಯನ್ ಅಯಿಲ್ ಬಂಕ್’ನಲ್ಲಿ ಘಟನೆ ಜರುಗಿದೆ. ಮಹಿಳಾ ಸಿಬ್ಬಂದಿ ಅನುಪಮಾ ಹಲ್ಲೆಗೊಳ್ಳಗಾದವರಾಗಿದ್ದು ಗ್ರಾಹಕ ಕೊತ್ತತ್ತಿ ಗ್ರಾಮದ ಬಸವಣ್ಣ ಹಲ್ಲೆ ಮಾಡಿದವರಾಗಿದ್ದಾರೆ.
ತನ್ನ ದ್ವಿಚಕ್ರ ವಾಹನಕ್ಕೆ ಪೆಟ್ರೋಲ್ ತುಂಬಿಸಲು ಬಂದ ಗ್ರಾಹಕ ದೂರದಲ್ಲಿ ವಾಹನ ನಿಲ್ಲಿಸಿದ್ದಾರೆ. ವಾಹನ ಮುಂದೆ ತೆರಲು ಮಹಿಳಾ ಸಿಬ್ಬಂದಿ ಸೂಚಿಸಿದಾಗ ಜಗಳಕ್ಕೆ ಮುಂದಾದ ಬಸವಣ್ಣ ಸಿಬ್ಬಂದಿಗೆ ಅವಾಚ್ಯ ಶಬ್ದದಿಂದ ನಿಂದಿಸಿ ಹಲ್ಲೆ ಮಾಡಿದ್ದಾರೆ. ಘಟನೆ ಬಂಕ್’ನ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.
ಈ ಕುರಿತು ಮಾಲೀಕ ಮಂಜುನಾಥ್ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲು ಮುಂದಾಗಿದ್ದಾರೆ. ಘಟನೆ ಕುರಿತು ಮಂಡ್ಯ ಜಿಲ್ಲಾ ಪೆಟ್ರೋಲಿಯಂ ಡೀಲರ್ಸ್ ಅಸೋಸಿಯೇಷನ್ ಖಂಡನೆ ವ್ಯಕ್ತಪಡಿಸಿ, ತಪ್ಪಿತಸ್ಥರ ವಿರುದ್ದ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದೆ.