Sunday, May 19, 2024

ಪ್ರಾಯೋಗಿಕ ಆವೃತ್ತಿ

ಬಿಜೆಪಿ 2ನೇ ಪಟ್ಟಿ ಬಿಡುಗಡೆ| ಸಿಂಹ, ಕರಡಿ, ಕಟೀಲ್, ಹೆಗಡೆ, ಸದಾನಂದ ಗೌಡ ಟಿಕೆಟ್ ನಿರಾಕರಣೆ

ಲೋಕಸಭೆ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಎರಡನೇ ಪಟ್ಟಿ ಇಂದು (ಮಾ.13) ಪ್ರಕಟಗೊಂಡಿದ್ದು,ಪ್ರತಾಪ ಸಿಂಹ,ಸಂಗಣ್ಣ ಕರಡಿ,ನಳಿನ್ ಕುಮಾರ್ ಕಟೀಲ್,ಸದಾನಂದಗೌಡ ಹಾಗೂ ಅನಂತಕುಮಾರ ಹೆಗಡೆ ಸೇರಿದಂತೆ ಒಂಭತ್ತು ಮಂದಿ ಸಂಸದರಿಗೆ ಟಿಕೆಟ್ ನಿರಾಕರಿಸಲಾಗಿದೆ.

ಒಟ್ಟು 72 ಅಭ್ಯರ್ಥಿಗಳ ಎರಡನೇ ಪಟ್ಟಿಯಲ್ಲಿ ಕರ್ನಾಟಕದ 20 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಲಾಗಿದೆ.

ಬೆಂಗಳೂರು ಉತ್ತರಕ್ಕೆ ಶೋಭಾ ಕರಂದ್ಲಾಜೆ, ಮೈಸೂರು-ಕೊಡಗು ಯಧುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ದಕ್ಷಿಣ ಕನ್ನಡಕ್ಕೆ ಬ್ರಿಜೇಶ್ ಚೌಟ, ಉಡುಪಿ- ಚಿಕ್ಕಮಗಳೂರಿಗೆ ಕೋಟ ಶ್ರೀನಿವಾಸ್ ಪೂಜಾರಿ, ಶಿವಮೊಗ್ಗಕ್ಕೆ ಬಿ.ವೈ ರಾಘವೇಂದ್ರ ಮತ್ತು ಹಾವೇರಿಗೆ ಬಸವರಾಜ ಬೊಮ್ಮಾಯಿ, ಬಳ್ಳಾರಿಗೆ ಬಿ.ಶ್ರೀರಾಮುಲು ಮತ್ತು ತುಮಕೂರಿಗೆ ವಿ. ಸೋಮಣ್ಣ ಪ್ರಮುಖ ಅಭ್ಯರ್ಥಿಗಳಾಗಿದ್ದಾರೆ.

ಹಾವೇರಿ ಶಿವಕುಮಾರ್ ಉದಾಸಿ,ದಕ್ಷಿಣ ಕನ್ನಡ ಅನಂತ ಕುಮಾರ ಹೆಗಡೆ,ಬಳ್ಳಾರಿ ದೇವೇಂದ್ರಪ್ಪ,ದಾವಣಗೆರೆ ಜಿ.ಎಂ.ಸಿದ್ದೇಶ್ವರ್ ಅವರಿಗೆ ಟಿಕೆಟ್ ನಿರಾಕರಣೆ ಮಾಡಲಾಗಿದೆ. ಚಾಮರಾಜನಗರ ನಗರ ಶ್ರೀನಿವಾಸ್ ಪ್ರಸಾದ್,ತುಮಕೂರು ಬಸವರಾಜು ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಹೇಳಿದ್ದರಿಂದ ಮಾಜಿ ಶಾಸಕ ಬಾಲರಾಜ್,ತುಮಕೂರಿಗೆ ಮಾಜಿ ಸಚಿವ ವಿ.ಸೋಮಣ್ಣ ಅವರಿಗೆ ಟಿಕೆಟ್ ನೀಡಲಾಗಿದೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!