Sunday, May 19, 2024

ಪ್ರಾಯೋಗಿಕ ಆವೃತ್ತಿ

ಮದ್ದೂರು| ಅಹಿಂದ ವೇದಿಕೆಯಿಂದ ಅಂಬೇಡ್ಕರ್ ಪರಿನಿಬ್ಬಾಣ ದಿನ ಆಚರಣೆ

ಮದ್ದೂರು ತಾಲೂಕು ಅಹಿಂದ ವೇದಿಕೆಯ ವತಿಯಿಂದ ಡಾ.ಬಿ.ಆರ್ ಅಂಬೇಡ್ಕರ್ ಅವರ 67ನೇ ಪರಿನಿಬ್ಬಾಣ ದಿನದ ಅಂಗವಾಗಿ ಮದ್ದೂರು ಪುರಸಭಾ ಆವರಣದಲ್ಲಿ ಇರುವ ಅಂಬೇಡ್ಕರ್ ರವರ ಪುತ್ಥಳಿಗೆ ಪುಷ್ಪಾರ್ಚನೆ ಮಾಡಿ, ಮೇಣದ ಬತ್ತಿ ಹಚ್ಚಿ ಬೆಳಗುವುದರ ಮೂಲಕ ಪರಿನಿಬ್ಬಾಣ ದಿನ ಆಚರಣೆ ಮಾಡಲಾಯಿತು.

ಮದ್ದೂರು ತಹಸೀಲ್ದಾರ್ ಸೋಮಶೇಖರ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಡಾ.ಬಿ.ಆರ್ ಅಂಬೇಡ್ಕರ್ ಅವರು ಈ ದೇಶದ ಸಂಪತ್ತು, ಇಡೀ ವಿಶ್ವವೇ ಮೆಚ್ಚುವಂತಹ ಸಂವಿಧಾನ ನೀಡಿದ್ದಾರೆ, ಅವರ ಆದರ್ಶವನ್ನು ಎಲ್ಲರೂ ಮೈಗೂಡಿಸಿಕೊಳ್ಳಬೇಕು ಎಂದರು.

ಇನ್ನೂ ಮುಂದೆ ತಾಲೂಕಿನಲ್ಲಿ ನಡೆಯುವ ದೇಶಕ್ಕಾಗಿ ಹೋರಾಡಿದ, ಸಾಧನೆ ಮಾಡಿದ ಮಹಾನ್ ವ್ಯಕ್ತಿಗಳ ಜಯಂತಿ ಆಚರಣೆ ಮಾಡುವಾಗ ಎಲ್ಲಾ ಸಮುದಾಯದ ಜನರನ್ನು ಕರೆದು ಆಚರಿಸಲಾಗುವುದು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಅಹಿಂದ ವೇದಿಕೆಯ ಅಧ್ಯಕ್ಷ ಅತಗೂರು ನಿಂಗಯ್ಯ, ಉಪಾಧ್ಯಕ್ಷರಾದ ಕೆ.ಟಿ.ಶಿವಕುಮಾರ್, ಇಮ್ತಿಯಾಜ್ ಉಲ್ಲಾ ಖಾನ್, ಪ್ರಧಾನ ಕಾರ್ಯದರ್ಶಿ ಶ್ರೀ ನಿವಾಸ ಶೆಟ್ಟಿ, ಎಸ್ ಮಹಾದೇವಯ್ಯ, ನಾಗಲಿಂಗ, ಗ್ರಾಮ ಸಹಾಯಕರ ಸಂಘದ ಅಧ್ಯಕ್ಷ ಮಹಾಲಿಂಗಯ್ಯ, ಖಜಾಂಚಿ ರಾಜ್ ಕುಮಾರ್, ಮುಖಂಡರಾದ ಹುಲಿಗೆರೆಪುರ ಮಹಾದೇವ, ನಾಗಭೂಷಣ್, ಸಿ.ಎ.ಕೆರೆ ಮೂರ್ತಿ, ಹೊಂಬಾಳೆ, ದೊರೆಸ್ವಾಮಿ, ಕೃಷ್ಣಪ್ಪ, ಪ್ರಶಾಂತ್, ನವೀನ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!