Tuesday, May 21, 2024

ಪ್ರಾಯೋಗಿಕ ಆವೃತ್ತಿ

ಕಾಂಗ್ರೆಸ್ ಟಿಕೆಟ್ ಸಿಕ್ಕರೆ ಗೆಲುವು ಶತಸಿದ್ಧ : ಶಂಕರೇಗೌಡ

ವರದಿ : ಪ್ರಭು ವಿ ಎಸ್

ನಮ್ಮ ಕುಟುಂಬ ಕಳೆದ ಎಪ್ಪತ್ತು ವರ್ಷಗಳಿಂದ ಕಾಂಗ್ರೆಸ್ ಪಕ್ಷಕ್ಕೆ ದುಡಿದಿದೆ, ನಮ್ಮ ಕುಟುಂಬದವರಿಗೆ ಈಗಾಗಲೇ ವಿಧಾನಸಭಾ ಟಿಕೆಟ್ ಸಿಗಬೇಕಾಗಿತ್ತು, ಈಗ ಅಂತಹ ಅವಕಾಶವಿದ್ದು ನನಗೆ ಕಾಂಗ್ರೆಸ್ ಪಕ್ಷದಿಂದ ಬಿ. ಫಾರಂ ನೀಡಿದರೆ ಸ್ಪರ್ಧಿಸಿ ಗೆಲ್ಲುವುದು ಶತಸಿದ್ಧ ಎಂದು ಬಿ.ವಿ.ಶಂಕರೇಗೌಡ ತಿಳಿಸಿದರು.

ಮದ್ದೂರು ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ತಂದೆ ಕಾಂಗ್ರೆಸ್ ಪಕ್ಷದಲ್ಲಿ ನಿಷ್ಠಾವಂತರಾಗಿ 70 ವರ್ಷಗಳ ಕಾಲ ಸೇವೆ ಸಲ್ಲಿಸಿದರು, ಕುಟುಂಬದ ಸದಸ್ಯರು, ಸಹೋದರರು ಸಹ ಕಾಂಗ್ರೆಸ್ ಪಕ್ಷದಲ್ಲಿ ವಿವಿಧ ಹುದ್ದೆಗಳನ್ನು ಅಲಂಕರಿಸಿದ್ದು, ತಾಲೂಕು ಬೋರ್ಡ್, ಗ್ರಾಮ ಪಂಚಾಯಿತಿ, ಜಿಲ್ಲಾ ಪಂಚಾಯಿತಿಗಳಲ್ಲಿ ಕಾಂಗ್ರೆಸ್ ಪಕ್ಷದಿಂದಲೇ ಸ್ಪರ್ಧಿಸಿ ಸೋಲು-ಗೆಲುವುಗಳನ್ನ ಅನುಭವಿಸಿದ್ದೇವೆ ಎಂದರು.

ನಮ್ಮ ತಂದೆಯವರಿಗೆ ಆಗಿನ ದಿನಗಳಲ್ಲೇ ವಿಧಾನಪರಿಷತ್ ಗೆ ಸ್ಪರ್ಧಿಸಲು ಬಿ.ಫಾರಂ ಅನ್ನು ನೀಡಬೇಕಾಗಿತ್ತು, ಆದರೆ ಕಾರಣಾಂತರದಿಂದ ಬೇರೆಯವರಿಗೆ ನೀಡಲಾಯಿತು. ಅಂದು ತಪ್ಪಿದ ಬಿ.ಫಾರಂ ಇದುವರೆಗೂ ನಮ್ಮ ಕುಟುಂಬಕ್ಕೆ ಸಿಕ್ಕಿಲ್ಲ ಎಂದ ಅವರು, ಈಗ ಬಿ.ಫಾರ್ಮ್ ದೊರೆತರೆ 2023 ರ ಚುನಾವಣೆಗೆ ಸ್ಪರ್ಧಿಸುತ್ತೇನೆ.
ಪಕ್ಷದಿಂದ ಯಾರಿಗೆ ಟಿಕೆಟ್ ಸಿಕ್ಕರೂ ಪ್ರಾಮಾಣಿಕವಾಗಿ ಅವರ ಪರವಾಗಿ ದುಡಿಯುವೆ ಎಂದರು.

ಈ ಸಂದರ್ಭದಲ್ಲಿ ಎಪಿಎಂಸಿ ಮಾಜಿ ಅಧ್ಯಕ್ಷೆ ಮಮತಾ ಶಂಕರೇಗೌಡ. ವಕೀಲರಾದ ಶಿವರಾಮು, ನಿತ್ಯಾನಂದ, ಕುದುರುಗುಂಡಿ ನಾಗೇಶ, ಚನ್ನಸಂದ್ರ ಪುಟ್ಟ, ಅಜ್ಜಳ್ಳಿ ಬಸವರಾಜು, ಜವರೇಗೌಡ, ಶಿವಲಿಂಗಯ್ಯ, ತಮ್ಮೇಗೌಡ, ಅಭಿನಂದನ್, ಉಮೇಶ್, ನಾಗಪ್ಪ, ರಮೇಶ್, ಪುರುಷೋತ್ತಮ್ ತಮ್ಮಣ್ಣೇಗೌಡ ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!