Sunday, May 5, 2024

ಪ್ರಾಯೋಗಿಕ ಆವೃತ್ತಿ

ಯುಗಾದಿ ಸಂಭ್ರಮ : ಬಹುಜನ ಸಾಧಕರಿಗೆ ಸನ್ಮಾನ

ಡಾ.ಬಿ.ಆರ್.ಅಂಬೇಡ್ಕರ್ ರಾಷ್ಟೀಯ ಫೆಲೋಶಿಪ್ ಪುರಸ್ಕೃತ ಡಾ.ಮಾದೇಶ್ ಜನ್ಮದಿನದ ಅಂಗವಾಗಿ ‘ಯುಗಾದಿ ಸಂಭ್ರಮ ಮತ್ತು ವಿವಿಧ ಕ್ಷೇತ್ರಗಳಲ್ಲಿನ ಬಹುಜನ ಸಾಧಕರಿಗೆ ಅಭಿನಂದನಾ ಸಮಾವೇಶ’ ಹಾಗೂ ಸಂಗೀತ ರಸಮಂಜರಿ ಕಾರ್ಯಕ್ರಮವನ್ನು ಮಾ.19ರಂದು ಸಂಜೆ 4 ಗಂಟೆಗೆ ಅಂಬೇಡ್ಕರ್ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಪತ್ರಕರ್ತ ದೇವರಾಜ ಕೊಪ್ಪ ತಿಳಿಸಿದರು.

ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಸಾಪ ಮಾಜಿ ಅಧ್ಯಕ್ಷ ಡಾ.ಹೆಚ್.ಎಸ್.ಮುದ್ದೇಗೌಡ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಮಾಜಿ ಶಾಸಕ ಡಿ.ಎಸ್.ವೀರಯ್ಯ, ಅಧೀಕ್ಷಕರ ಅಭಿಯಂತರ ಚಂದ್ರಹಾಸ, ವಿಶ್ರಾಂತ ಪ್ರಾಂಶುಪಾಲರಾದ ಡಾ.ಅನಿಲ್ ಕುಮಾರ್, ಡಾ.ರಾಮಸ್ವಾಮಿ, ಸಂಗೀತ ನಿರ್ದೇಶಕ ಮದನ್ ಮಲ್ಲು ಭಾಗವಹಿಸುವರು. ಕರ್ನಾಟಕ ರಾಜ್ಯ ಒಕ್ಕಲಿಗ ಸಂಘದ ನಿರ್ದೇಶಕ ಅಶೋಕ್ ಜಯರಾಂ ಉಪಸ್ಥಿತರಿರುವರು ಎಂದರು.

ಗೋಷ್ಠಿಯಲ್ಲಿ ಯರಹಳ್ಳಿ ಪುಟ್ಟಸ್ವಾಮಿ, ಮರಿಯಯ್ಯ, ಗುರುಸಿದ್ದಯ್ಯ, ರಮೇಶ್ ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!