ಕೊಳಚೆ ನಿರ್ಮೂಲನಾ ಮಂಡಳಿ ಹಾಗೂ ಕರ್ಡ್ಸ್ ಸಂಸ್ಥೆ, ಬೆಂಗಳೂರು ಇವರ ಸಹಯೋಗದಲ್ಲಿ ಫೆ.22ರಂದು ನಾಗಮಂಗಲ ಪಟ್ಟಣದ ಮೈಸೂರು ರಸ್ತೆಯಲ್ಲಿರುವ ಸರ್ಕಾರಿ ಬಾಲಕಿಯರ ಉರ್ದು ಶಾಲೆಯಲ್ಲಿ ಕೊಳಚೆ ಪ್ರದೇಶಗಳ ವಾಸಿಗಳಿಗಾಗಿ ಉಚಿತ ಆರೋಗ್ಯ ತಪಾಸಣಾ ಮತ್ತು ಚಿಕಿತ್ಸಾ ಶಿಬಿರವನ್ನು ಆಯೋಜಿಸಲಾಗಿದೆ.
ನಾಗಮಂಗಲ ಪಟ್ಟಣದ ಸ್ವೀಪರ್ಸ್ ಕಾಲೋನಿ, ಎ ಡಿ ಕಾಲೋನಿ, ಎ ಕೆ ಕಾಲೋನಿ, ಸುಭಾಷ್ ನಗರ, ಮುರಾದ್ ನಗರದಲ್ಲಿ ವಾಸಿಸುತ್ತಿರುವ ಸಾರ್ವಜನಿಕರು ಇದರ ಸದುಪಯೋಗ ಪಡೆಯಬಹುದು.
ಶಿಬಿರದಲ್ಲಿ ಇತ್ತೀಚಿನ ದಿನಗಳಲ್ಲಿ ಸರ್ವೇ ಸಾಮಾನ್ಯವಾಗಿರುವ ಮಧುಮೇಹ, ರಕ್ತದೊತ್ತಡ, ಅಪೌಷ್ಟಿಕತೆ ಇನ್ನಿತರ ಕಾಯಿಲೆಗಳ ತಪಾಸಣೆ ನಡೆಸಿ, ಉಚಿತ ಸಲಹೆ ನೀಡಿ, ಔಷಧಿಗಳನ್ನು ವಿತರಿಸಲಾಗುವುದು ಎಂದು ಕರ್ಡ್ಸ್ ಸಂಸ್ಥೆಯ ಮುಖ್ಯಸ್ಥರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.