Thursday, September 19, 2024

ಪ್ರಾಯೋಗಿಕ ಆವೃತ್ತಿ

ಮಂಡ್ಯ | ಮಾರಕಾಸ್ತ್ರಗಳಿಂದ ಕೊಚ್ಚಿ ಯುವಕನ ಬರ್ಬರ ಹತ್ಯೆ

4-5 ಮಂದಿಯಿದ್ದ ದುಷ್ಕರ್ಮಿಗಳ ತಂಡವೊಂದು ಮಾರಕಾಸ್ತ್ರಗಳಿಂದ ಕೊಚ್ಚಿ ಯುವಕನನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಇಂದು ರಾತ್ರಿ 8:30ರ ಸುಮಾರಿಗೆ ಮಂಡ್ಯದ ಗಾಂಧಿನಗರದಲ್ಲಿ ನಡೆದಿದೆ.

ಮಂಡ್ಯದ ಗಾಂಧಿನಗರ 4ನೇ ಕ್ರಾಸ್ ನಲ್ಲಿ ವಾಸವಾಗಿರುವ ಹಿಟ್ಟನಹಳ್ಳಿ ಕೊಪ್ಪಲು ಗ್ರಾಮದ ಕುಮಾರ್ ಎಂಬುವರ ಪುತ್ರ ಅಕ್ಷಯ್ @ ಗಟ್ಲು (22) ಎಂಬಾತನೇ ದುಷ್ಕರ್ಮಿಗಳಿಂದ ಭೀಕರವಾಗಿ ಕೊಲೆಯಾದ ಯುವಕ.

ಇಂದು ರಾತ್ರಿ 8.30 ರ ಸಮಯದಲ್ಲಿ 4-5 ಮಂದಿ ದುಷ್ಕರ್ಮಿಗಳು ಹೊಸಹಳ್ಳಿ ರಸ್ತೆಯ ಟೀ ಅಂಗಡಿ ಬಳಿ ಇದ್ದ ಅಕ್ಷಯ್ ಮೇಲೆ ಮಚ್ಚು,ಲಾಂಗ್ ನಿಂದ ಅಟ್ಟಾಡಿಸಿಕೊಂಡು ಹಲ್ಲೆ ನಡೆಸಲು ಮುಂದಾಗಿದ್ದಾರೆ.

nudikarnataka.com

ದುಷ್ಕರ್ಮಿಗಳಿಂದ ತಪ್ಪಿಸಿಕೊಂಡು ಅಕ್ಷಯ್ ಅಲ್ಲಿಂದ ಗಾಂಧಿನಗರ ನಾಲ್ಕನೇ ಕ್ರಾಸ್ ಗೆ ನುಗ್ಗಿದ್ದಾನೆ. ಹಿಂದೆಯೇ ಆತನನ್ನು ಅಟ್ಟಾಡಿಸಿಕೊಂಡು ಬಂದ ದುಷ್ಕರ್ಮಿಗಳು ಸ್ಟೇರ್ ಕೇಸ್ ಬಳಿ ಬಿದ್ದ ಅಕ್ಷಯ್ ಮೇಲೆ ಮುಗಿಬಿದ್ದ ದುಷ್ಕರ್ಮಿಗಳು ಮಚ್ಚು-ಲಾಂಗ್ ನಿಂದ ಆತನ ಮೇಲೆ ಹಲ್ಲೆ ನಡೆಸಿದ್ದಾರೆ. ದುಷ್ಕರ್ಮಿಗಳ ಮಾರಕಾಸ್ತ್ರದ ದಾಳಿಗೆ ಅಕ್ಷಯ್ ಸ್ಥಳದಲ್ಲಿಯೇ ಪ್ರಾಣ ಬಿಟ್ಟಿದ್ದಾನೆ.

ಸ್ಥಳಕ್ಕೆ ಪಶ್ಚಿಮ ಠಾಣೆಯ ಪೋಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.ಕೊಲೆಯಾದ ಯುವಕ ಅಕ್ಷಯ್ ದೇಹವನ್ನು ಶವಾಗಾರಕ್ಕೆ ಸಾಗಿಸಿದ ಪೋಲೀಸರು ಆತನ ತಂದೆ ಕುಮಾರ್ ಕೊಟ್ಟ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು, ದುಷ್ಕರ್ಮಿಗಳು ಪತ್ತೆಗೆ ಮುಂದಾಗಿದ್ದಾರೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!