ಪ್ರಸಿದ್ಧ ನಾಟಕಕಾರ ಜಯರಾಮ್ ರಾಯಪುರ ನಾಟಕೋತ್ಸವವನ್ನು ಮಾ.16,17,18ರಂದು ಮಂಡ್ಯನಗರದ ಪಿಇಎಸ್ ಕಾಲೇಜಿನ ವಿವೇಕಾನಂದ ರಂಗಮಂದಿರ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಜಯಪ್ರಕಾಶ್ ಗೌಡ ತಿಳಿಸಿದರು.
ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾ.16ರಂದು ಸಂಜೆ 6.30 ಗಂಟೆಗೆ ನಾಡಪ್ರಭು ಕೆಂಪೇಗೌಡರ ಕುರಿತು ಜೀವನಗಾಥೆ ‘ಸಿರಿಗೆ ಸೆರೆ’ ನಾಟಕ ಪ್ರದರ್ಶನ ನಡೆಯಲಿದೆ. ಮಾ.17ರಂದು ಸಂಜೆ 6.30ಕ್ಕೆ ಗಂಗರಸರ ಕಡೆಗಾಲದ ಹೃದ್ಯ ಚಿತ್ರಣವಿರುವ ಐತಿಹಾಸಿಕ ನಾಟಕ ‘ಚಾವುಂಡರಾಯ’ ಪ್ರದರ್ಶನ ನಡೆಯಲಿದೆ ಎಂದರು.
ಮಾ.18ರಂದು ಸಂಜೆ 6.30 ಗಂಟೆಗೆ ಶಹಜಹಾನನ ವಾರಸುದಾರಿಕೆಗೆ ಜರುಗಿದ ಸಂಘರ್ಷದ ಹಿನ್ನೆಲೆಯ ಐತಿಹಾಸಿಕ ನಾಟಕ ‘ವಾರಸುದಾರ’ ಪ್ರದರ್ಶನ ನಡೆಯಲಿದೆ. ಸೀಸನ್ ಟಿಕೆಟ್ ಗೆ ₹100 ಶುಲ್ಕವಿದ್ದು, ಪ್ರತಿನಿತ್ಯ ಪ್ರವೇಶಕ್ಕೆ ₹ 50 ಪ್ರವೇಶ ಶುಲ್ಕವಿರುತ್ತದೆ ಎಂದು ತಿಳಿಸಿದರು.
ಗೋಷ್ಠಿಯಲ್ಲಿ ನಾಗಮಂಗಲ ಕರ್ನಾಟಕ ಜಾನಪದ ಪರಿಷತ್ ಅಧ್ಯಕ್ಷ ಮಂಜೇಶ್, ಕಾಂತಪುರ ಗ್ರಾಮ ಪಂಚಾಯಿತಿ ಅಧ್ಯಕ್ಷ ಸಿ.ಕೆ.ರಮೇಶ್, ಕರ್ನಾಟಕ ಸಂಘದ ಕಾರ್ಯದರ್ಶಿ ಎಚ್.ಡಿ.ಸೋಮಶೇಖರ್ ಉಪಸ್ಥಿತರಿದ್ದರು