Sunday, May 19, 2024

ಪ್ರಾಯೋಗಿಕ ಆವೃತ್ತಿ

ಬಾಲಕಿ ಅತ್ಯಾಚಾರ-ಕೊಲೆ ಪ್ರಕರಣ: ತನಿಖಾ ತಂಡಕ್ಕೆ ಒಂದು ಲಕ್ಷ ಬಹುಮಾನ

ಮಳವಳ್ಳಿಯಲ್ಲಿ ನಡೆದ ಬಾಲಕಿಯ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು ಅತ್ಯಂತ ತ್ವರಿತವಾಗಿ ತನಿಖೆ ನಡೆಸಿ ಆರೋಪಿಯನ್ನು ಬಂಧಿಸಿರುವ ಸ್ಥಳೀಯ ಪೋಲಿಸರನ್ನು ಹೊಗಳಿದ ಎಡಿಜಿಪಿ ಅಲೋಕ್ ಕುಮಾರ್ ಅವರು ತನಿಖಾ ತಂಡಕ್ಕೆ ಒಂದು ಲಕ್ಷ ರೂಪಾಯಿ ನಗದು ಬಹುಮಾನ ಘೋಷಿಸಿದರು.

ಈ ಸಂದರ್ಭದಲ್ಲಿ ದಕ್ಷಿಣ ವಲಯ ಐಜಿಪಿ ಪ್ರವೀಣ್ ಪವಾರ್ ಮಧುಕರ್, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಎನ್.ಯತೀಶ್ ಹಾಜರಿದ್ದರು.

ಬಾಲಕಿ ಕಾಣೆಯಾದ ನಂತರ ಈ ಪ್ರಕರಣ ಸಾಕಷ್ಟು ಕಗ್ಗಂಟಾಗಿತ್ತು.ನಂತರ ಬಾಲಕಿಯ ಶವ ಮನೆಯೊಂದರ ಕಟ್ಟಡದ ನೀರಿನ ಸಂಪ್ ನಲ್ಲಿ ಪತ್ತೆಯಾಗಿತ್ತು.ನಂತರ ಬಾಲಕಿಯ ಮೇಲೆ ಅತ್ಯಾಚಾರ ಮಾಡಿ ಕೊಲೆ ಮಾಡಿರುವುದು ಸಾಬೀತಾಗಿತ್ತು.

ಮಳವಳ್ಳಿಯ ಪೋಲಿಸರು ತನಿಖೆಗೆ ಮುಂದಾದ ಸಂದರ್ಭದಲ್ಲಿ ಮೊದಲು ಆರೋಪಿಯ ಪತ್ತೆಯಾಗಲಿಲ್ಲ. ತನಿಖೆಯ ಆಳಕ್ಕೆ ಇಳಿದಂತೆ ಟ್ಯೂಷನ್ ಸೆಂಟರ್ ನೋಡಿಕೊಳ್ಳುತ್ತಿದ್ದವನೇ ಬಾಲಕಿ ಮೇಲೆ ಅತ್ಯಾಚಾರ ಮಾಡಿ ಕೊಲೆ ಮಾಡಿರುವ ಸಂಗತಿ ಬೇಧಿಸಿದರು.ಡಿವೈಎಸ್ಪಿ ನವೀನ್ ಕುಮಾರ್, ಸಿಪಿಐ ರಾಜೇಶ್,ಎಸ್ಐಗಳಾದ ಶೇಷಾದ್ರಿ ಕುಮಾರ್, ಅಶೋಕ್ ಮತ್ತಿತರರಿದ್ದ ತನಿಖಾ ತಂಡ ಪ್ರಕರಣ ನಡೆದ ರಾತ್ರಿಯೇ ಆರೋಪಿಯನ್ನು ಬಂಧಿಸಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!