Sunday, May 19, 2024

ಪ್ರಾಯೋಗಿಕ ಆವೃತ್ತಿ

ಕೆ.ಆರ್.ಪೇಟೆ| ಹರಪನಹಳ್ಳಿ ಡೇರಿ ಅಧ್ಯಕ್ಷರಾಗಿ ಡಾಲು ರವಿ ಆಯ್ಕೆ

ಕೆ.ಆರ್.ಪೇಟೆ ತಾಲೂಕಿನ ಸಂತೆಬಾಚಹಳ್ಳಿ ಹೋಬಳಿಯ ಹರಪನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಜೆಡಿಎಸ್ ಮುಖಂಡ ಮನಮುಲ್ ನಿರ್ದೇಶಕ ಡಾಲು ರವಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ .

ಇಂದು ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಡಾಲುರವಿ ಅವರನ್ನು ಹೊರತುಪಡಿಸಿ ಬೇರೆ ಯಾರೂ ನಾಮಪತ್ರ ಸಲ್ಲಿಸದ ಕಾರಣ ಚುನಾವನಾಧಿಕಾರಿ ಭರತಕುಮಾರ್ ಅವರು ಡಾಲು ರವಿ ಅವರ ಅವಿರೋಧ ಆಯ್ಕೆಯನ್ನು ಪ್ರಕಟಿಸಿದರು.

ಹರಪನಹಳ್ಳಿ ಡೈರಿಯ ಉಪಾಧ್ಯಕ್ಷರಾಗಿ ರಾಮೇಗೌಡ ಆಯ್ಕೆಯಾದರು. ನೂತನ ಅಧ್ಯಕ್ಷ ಉಪಾಧ್ಯಕ್ಷರನ್ನು ಮುಖಂಡರಾದ ಕೈಗೊನಹಳ್ಳಿ ಜಯರಾಮು, ಜಾಗಿನಕೆರೆ ಅಂಬರೀಶ್, ಮಾವಿನಕಟ್ಟೆ ಕೊಪ್ಪಲು ಚೇತನಕುಮಾರ್, ಜಯರಾಮೇಗೌಡ ಹಾಗೂ ಆಡಳಿತ ಮಂಡಳಿಯ ನಿರ್ದೇಶಕರು ಅಭಿನಂದಿಸಿದರು.

ನಾನು ಎರಡು ಅವಧಿಗೆ ಮನಮುಲ್ ನಿರ್ದೇಶಕನಾಗಿ ಆಯ್ಕೆಯಾಗಲು ಹರಪನಹಳ್ಳಿ ಹಾಲಿನ ಡೈರಿಯು ಮುಖ್ಯ ಕಾರಣವಾಗಿದೆ. ಮತ್ತೊಂದು ಅವಧಿಗೆ ಮಂಡ್ಯ ಹಾಲು ಒಕ್ಕೂಟದ ನಿರ್ದೇಶಕನಾಗಿ ಸ್ಪರ್ಧೆ ಮಾಡಲು ವೇದಿಕೆಯು ಸಿದ್ದವಾಗಿದ್ದು ಹಾಲು ಉತ್ಪಾದಕರ ಪ್ರೀತಿ ಹಾಗೂ ವಿಶ್ವಾಸಕ್ಕೆ ಕಟ್ಟುಬಿದ್ದು ಹರಪನಹಳ್ಳಿ ಹಾಲಿನ ಡೈರಿಯ ಅಧ್ಯಕ್ಷ ಸ್ಥಾನ ವಹಿಸಿಕೊಳ್ಳಲು ಸಿದ್ಧನಾಗಿದ್ದು, ಹರಪನಹಳ್ಳಿ ಹಾಲಿನ ಡೈರಿಯನ್ನು ಮಾದರಿಯಾಗಿ ಅಭಿವೃದ್ಧಿಪಡಿಸಿ ತೋರಿಸಿದ್ದೇನೆ ಎಂದು ಹೇಳಿದ ರವಿ ತಾಲ್ಲೂಕಿನ ಜನತೆ ನನ್ನ ಮೇಲೆ ತೋರಿಸುತ್ತಿರುವ ಪ್ರೀತಿ ವಿಶ್ವಾಸಕ್ಕೆ ಆಬಾರಿಯಾಗಿದ್ದೇನೆ ಎಂದು ಡಾಲು ರವಿ ಹೇಳಿದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!