ಮಂಡ್ಯ ನಗರದ ಕಾರ್ಮೆಲ್ ಕಾನ್ವೆಂಟ್ ಶಾಲೆಯ ವಿದ್ಯಾರ್ಥಿನಿ ಲಿಪಿಕಿರಣ್ ರವರು ಎಸ್ಎಸ್ಎಲ್ ಸಿ ಪರೀಕ್ಷೆಯಲ್ಲಿ 623 ಅಂಕವನ್ನು ಪಡೆದುಕೊಂಡು ಶಾಲೆಗೆ ಹಾಗೂ ಪೋಷಕರಿಗೆ ಕೀರ್ತಿಯನ್ನು ತಂದಿರುತ್ತಾರೆ.
ಲಿಪಿಕಿರಣ್ ರವರು ಕನ್ನಡ ಸಾಹಿತ್ಯ ಪರಿಷತ್ ನ ನಗರ ಅಧ್ಯಕ್ಷೆ ಸುಜಾತ ಕೃಷ್ಣರವರ ಮೊಮ್ಮಗಳಾಗಿದ್ದು, ಬಿಂದು, ಎಂ. ಕೆ ಮಧು ಕಿರಣ್ ರವರ ಸುಪುತ್ರಿಯಾಗಿರುತ್ತಾರೆ. ಲಿಪಿಕಿರಣ್ ರವರಿಗೆ ಶಾಲೆಯ ಮುಖ್ಯ ಶಿಕ್ಷಕಿ ಸಿಸ್ಟರ್, ವೆನಿಶಾ ಹಾಗೂ ಆಡಳಿತ ಮಂಡಳಿಯ ಸದಸ್ಯರು ಅಭಿನಂದಿಸಿರುತ್ತಾರೆ.
ಪ್ರಸಕ್ತ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷಾ ಫಲಿತಾಂಶದಲ್ಲಿ ಮದ್ದೂರು ತಾಲೂಕು ಭಾರತೀನಗರ ಪ್ರಶಾಂತ್ ಸ್ಕೂಲ್ ಆಫ್ ಬಿಲಿಯನ್ ಶಾಲೆಯ ವಿದ್ಯಾರ್ಥಿನಿ ಡಿ.ಎಸ್. ಅನನ್ಯ 612 (97.92) ಅಂಕ ಪಡೆದು ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿ ಶಾಲೆಗೆ ಹಾಗೂ ಪೋಷಕರಿಗೆ ಕೀರ್ತಿಯನ್ನು ತಂದಿರುತ್ತಾರೆ.
ಚಾಂಷುಗರ್ ಉದ್ಯೋಗಿ ಡಿ.ಇ. ಶಿವಪ್ರಸಾದ್, ಬಿ.ಸಿ. ಮೀನಾಕ್ಷಿ ದಂಪತಿಗಳ ಪುತ್ರಿ ಡಿ.ಎಸ್.ಅನನ್ಯ ಅವರ ಸಾಧನೆಗೆ ಶಾಲಾ ಆಡಳಿತ ಮಂಡಳಿ ಅಭಿಂದನೆ ಸಲ್ಲಿಸಿದೆ.