ಕರ್ನಾಟಕದಲ್ಲಿ ತೋಟಗಾರಿಕೆ ಇಲಾಖೆ ಇದೇ ಪ್ರಥಮ ಬಾರಿಗೆ ವಿವಿಧ ಯೋಜನೆಗಳಡಿ ಫಲಾನುಭವಿಗಳಿಗೆ ನೇರವಾಗಿ ಅವರ ಖಾತೆಗೆ ಯೋಜನೆಯ ಮೊತ್ತವನ್ನು ವರ್ಗಾವಣೆ ಮಾಡುತ್ತಿದ್ದು, ಇಂತಹ ಸೌಲಭ್ಯವನ್ನು ಫಲಾನುಭವಿಗಳು ಸದುಪಯೋಗಪಡಿಸಿಕೊಳ್ಳಬೇಕು ಎಂದು ಬ್ಯಾಂಕ್ ಆಫ್ ಬರೋಡ ಬ್ಯಾಂಕಿನ ವಲಯ ಮುಖ್ಯಸ್ಥ ಸುಧಾಕರ ಡಿ.ನಾಯಕ್ ತಿಳಿಸಿದರು.
ಬ್ಯಾಂಕ್ ಆಫ್ ಬರೋಡ ಮಂಡ್ಯ ಇವರ ಆಶ್ರಯದಲ್ಲಿ ಮಂಡ್ಯನಗರದ ಕನಕ ಸಮುದಾಯ ಭವನದಲ್ಲಿ ನಡೆದ ಬ್ಯಾಂಕ್ ಮಿತ್ರ ಸಮಾವೇಶದಲ್ಲಿ ಬ್ಯಾಂಕ್ ಮಿತ್ರರಲ್ಲಿ ಅತ್ಯುತ್ತಮ ಸಾಧನೆ ಮಾಡಿದವರಿಗೆ ಅವರು ಬಹುಮಾನ ವಿತರಿಸಿ ಮಾತನಾಡಿದದರು.
ಕಳೆದ 7 – 8 ವರ್ಷಗಳಿಂದ ಈ ಕಾರ್ಯಕ್ರಮಗಳನ್ನು ಅನುಷ್ಠಾನ ಮಾಡಿಕೊಂಡು ಬರಲಾಗುತ್ತಿದೆ. ಬ್ಯಾಂಕ್ ಮಿತ್ರರಾಗಿ ಸಮಸ್ಯೆಗಳನ್ನು ಬಗೆಹರಿಸಿದರೆ,ಇನ್ನು ಅತಿ ಹೆಚ್ಚು ವೇಗವಾಗಿ ಯಾವುದೇ ಫಲಾನುಭವಿಗೆ ಯೋಜನೆಗಳ ಸೌಲಭ್ಯ ಮತ್ತು ಸಹಾಯಧನವನ್ನು ಮತ್ತಷ್ಟು ಪರಿಣಾಮಕಾರಿಯಾಗಿ ತಲುಪಿಸಲು ಸಾಧ್ಯವಾಗುತ್ತದೆ. ಬ್ಯಾಂಕ್ ಫಲಾನುಭವಿಗಳ ಖಾತೆಗೆ ಆಧಾರ್ ಕಾರ್ಡ್ ಲಿಂಕ್ ಆಗಿದ್ದರೆ ಎರಡು ನಿಮಿಷದಲ್ಲಿ
ಅವರ ಖಾತೆಗೆ ಹಣ ಜಮಾವಾಗುತ್ತದೆ ಎಂದರು.
ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ ಡಿ.ಮಂಜುನಾಥ್ ಮಾತನಾಡಿ, ಫಲಾನುಭವಿಗಳು ನೀಡಿರುವ ಖಾತೆಯಲ್ಲಿ ಕೆಲವು ನಿಬಂಧನೆಗಳು ತಪ್ಪುಗಳು ಆದ ಸಂದರ್ಭದಲ್ಲಿ ಸಮಸ್ಯೆಗಳು ಎದುರಾಗುತ್ತಿವೆ, ಅವನ್ನು ಬ್ಯಾಂಕ್ ಮಿತ್ರರು ಎಷ್ಟರಮಟ್ಟಿಗೆ ಪರಿಹರಿಸಬಹುದು, ರೈತರ ಜೊತೆ ನೇರ ಸಂಪರ್ಕ ಹೊಂದಿರುವುದರಿಂದ ಈ ಸಮಸ್ಯೆಗಳನ್ನು ಬಗೆಹರಿಸಿದರೆ ಆ ಕೀರ್ತಿ ಬ್ಯಾಂಕ್ ಮಿತ್ರರಿಗೆ ಸಲ್ಲುತ್ತದೆ. ಬ್ಯಾಂಕ್ ಮಿತ್ರ ಎಂದರೆ ಬ್ಯಾಂಕಿನ ಗ್ರಾಹಕರಿಗೆ ಬ್ಯಾಂಕಿನ ಪರವಾಗಿ ಮಿತ್ರರು ಎಂದರ್ಥ, ಎಷ್ಟು ಸಾಧ್ಯವೊ ಅಷ್ಟು ವೇಗವಾಗಿ ಕಾರ್ಯ ನಿರ್ವಹಿಸುವಂತಾಗಬೇಕು ಎಂದರು.
ಕಾರ್ಯಕ್ರಮದಲ್ಲಿ ಮೈಸೂರಿನ ಬ್ಯಾಂಕ್ ಆಫ್ ಬರೋಡದ ವ್ಯವಸ್ಥಾಪಕ ಅನೋಜ್, ಮಂಡ್ಯ ಶಾಖೆಯ ಕ್ಷೇತ್ರಿಯ ವ್ಯವಸ್ಥಾಪಕಿ ರೂಪ, ಜಿ. ಉಪಸ್ಥಿತರಿದ್ದರು.