Sunday, May 19, 2024

ಪ್ರಾಯೋಗಿಕ ಆವೃತ್ತಿ

ಹುಲ್ಲಿನ ಮೆದೆ ಬೆಂಕಿಗಾಹುತಿ : ₹ 30 ಸಾವಿರ ನಷ್ಟ

ಹುಲ್ಲಿನ ಮೆದೆಗೆ ಕಿಡಿಗೇಡಿಗಳು ಬೆಂಕಿ ಹಚ್ಚಿದ ಪರಿಣಾಮ ಮೆದೆ ಸುಟ್ಟು ಕರಕಲಾಗಿರುವ ಘಟನೆ ಮಂಡ್ಯ ತಾಲ್ಲೂಕಿನ ಬಸರಾಳು ಹೋಬಳಿಯ ಹುಲ್ಲಹಳ್ಳಿ ಗ್ರಾಮದಲ್ಲಿ ಕಳೆದ ರಾತ್ರಿ ಜರುಗಿದೆ.

ಗ್ರಾಮದ ಕನಕೇಗೌಡರ ಪುತ್ರ ಮರಿಯಪ್ಪ ಎಂಬುವವರು ತಮ್ಮ ಜಾನುವಾರುಗಳಿಗಾಗಿ ಸಂಗ್ರಹಿಸಿದ ಹುಲ್ಲು  ಸಂಪೂರ್ಣ ಭಸ್ಮವಾಗಿದೆ.

ಘಟನೆಯಿಂದ 30 ಸಾವಿರ ರೂ.ಗೂ ಹೆಚ್ಚಿನ‌ ನಷ್ಟ ಸಂಭವಿಸಿದೆ. ಘಟನೆ ಕುರಿತು ‌ಬಸರಾಳು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!