ಮೈಸೂರು ಭಾಗದ ನೈಸರ್ಗಿಕ ಕೃಷಿ ತಜ್ಙ ಅವಿನಾಶ್ ಟಿ.ಜಿ.ಎಸ್ ರವರ “ಬೆಳಕಿನ ಬೇಸಾಯ” ಪುಸ್ತಕ ಬಿಡುಗಡೆ ಕಾರ್ಯಕ್ರಮವು, ಇದೇ ಭಾನುವಾರ 27 ರಂದು, ಬೆಳಗ್ಗೆ 10:30ಕ್ಕೆ ಮೈಸೂರಿನ ಮೂಡ ಕಛೇರಿಯ ಬಳಿ ಇರುವ ‘ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರ್ಸ್ ಸಭಾಂಗಣ’ದಲ್ಲಿ ನಡೆಯಲಿದೆ.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ವರುಣಾ ಕ್ಷೇತ್ರದ ವಿಧಾನಸಭಾ ಸದಸ್ಯರಾದ ಡಾ.ಯತೀಂದ್ರ ಸಿದ್ದರಾಮಯ್ಯ, ಪ್ರಗತಿಪರ ಲೇಖಕರಾದ ಬಂಜಗೆರೆ ಜಯಪ್ರಕಾಶ್, ಕೃಷಿ ವಿಜ್ಙಾನಿ ಪ್ರಕಾಶ್ ಕಮ್ಮರಡ್ಡಿ, ಅಹರ್ಶಿನಿ ಪ್ರಕಾಶನದ ಅಕ್ಷತಾ ರವರು, ಈ ದಿನ.ಕಾಮ್ ಮಾಧ್ಯಮದ ಅಶೋಕ್ ರಾಮ್, ಹಾಗು ಸಾಮಾಜಿಕ ಕಾರ್ಯಕರ್ತೆ ರೂಪ ಹಾಸನ ರವರು ಭಾಗವಹಿಸಲಿದ್ದಾರೆ.