ಮಳವಳ್ಳಿ ತಾಲ್ಲೂಕಿನಲ್ಲಿರುವ ಗುತ್ತಿಗೆ ಆಧಾರದ ಎಲ್ಲಾ ಪೌರ ಸೇನಾನಿಗಳಿಗೆ ಡಾ. ರಾಮಮನೋಹರ ಲೋಹಿಯಾ ವಿಚಾರ ವೇದಿಕೆ – ಕರ್ನಾಟಕ ವತಿಯಿಂದ ತಲಾ ಒಂದು ಲಕ್ಷದ ಉಚಿತ ಎಲ್ಐಸಿ ಬಾಂಡ್ಗಳ ವಿತರಣಾ ಕಾರ್ಯಕ್ರಮ ನ.19ರ ಬೆಳಿಗ್ಗೆ 11 ಗಂಟೆಗೆ ಮಳವಳ್ಳಿ ಪುರಸಭೆ ಕಚೇರಿ ಹಿಂಭಾಗದಲ್ಲಿರುವ ಪೌರ ಸೇನಾನಿಗಳ ಕಾಲೋನಿಯಲ್ಲಿ ನಡೆಯಲಿದೆ.
ಮುಖ್ಯ ಅತಿಥಿಗಳಾಗಿ ಮೈಸೂರು ಮಹಾನಗರ ಪಾಲಿಕೆಯ ಮಾಜಿ ಮೇಯರ್ ನಾರಾಯಣ್ ಹಾಗೂ ಹೈಕೋರ್ಟ್ ವಕೀಲರಾದ ಶತಬಿಷ್ ಅವರು ಪಾಲ್ಗೊಳ್ಳಲಿದ್ದಾರೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೆಪಿಸಿಸಿ ಕಾರ್ಯದರ್ಶಿ, ಡಾ.ರಾಮ ಮನೋಹರ ಲೋಹಿಯಾ ವಿಚಾರ ವೇದಿಕೆ ಅಧ್ಯಕ್ಷ ಜಿ.ಎಸ್.ಶಿವಣ್ಣ ವಹಿಸಲಿದ್ದಾರೆ.
ಮಳವಳ್ಳಿ ತಾಲ್ಲೂಕಿನ ಸ್ವಚ್ಚತೆಗಾಗಿ ಪ್ರತಿದಿನ ಕಾರ್ಯ ನಿರ್ವಹಿಸುವ ಪೌರ ಕಾರ್ಮಿಕರು ಬಹಳ ಸಂಕಷ್ಟದಲ್ಲಿ ಜೀವನ ಸಾಗಿಸುತ್ತಿದ್ದಾರೆ.ಗುತ್ತಿಗೆ ಆಧಾರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಇವರಿಗೆ ಜೀವನದ ಭದ್ರತೆ ಇಲ್ಲ.ಹಾಗಾಗಿ ಇಂತಹ ಪೌರ ಸೇನಾನಿಗಳ ಪರ ನಿಲ್ಲುವ ಭಾಗವಾಗಿ ಮಳವಳ್ಳಿ ತಾಲೂಕಿನಲ್ಲಿರುವ 60ಕ್ಕೂ ಹೆಚ್ಚು ಪೌರ ಸೇನಾನಿಗಳಿಗೆ ನಾಳೆ ಎಲ್ಐಸಿ ಬಾಂಡ್ ವಿತರಣೆ ಮಾಡಲಾಗುತ್ತಿದೆ.