ರೈತರ ಬೇಡಿಕೆ ಈಡೇರಿಸದ ಸರ್ಕಾರದ ನೀತಿ ಖಂಡಿಸಿ ಡಿ.19ರಂದು ರೈತ ಸಂಘ ಕರೆ ನೀಡಿರುವ ”ಮಂಡ್ಯ ಬಂದ್” ಗೆ ಕರ್ನಾಟಕ ರಕ್ಷಣಾ ವೇದಿಕೆ (ಶಿವರಾಮೇಗೌಡ ಬಣ) ಬೆಂಬಲ ಸೂಚಿಸಿ ಮಂಡ್ಯನಗರದಲ್ಲಿ ಜಾಗೃತಿ ಜಾಥಾ ನಡೆಸಿ ಬಂದ್ ಬೆಂಬಲಿಸುವಂತೆ ಮನವಿ ಮಾಡಿತು.
ಮಂಡ್ಯ ನಗರದ ಮಹಾವೀರ ವೃತ್ತದಿಂದ ಅಧ್ಯಕ್ಷ ಹೆಚ್.ಡಿ.ಜಯರಾಂ ನೇತೃತ್ವದಲ್ಲಿ ಕಾಲ್ನಡಿಗೆ ಜಾಥಾ ಅರಂಭಿಸಿ ಕರವೇ ಕಾರ್ಯಕರ್ತರು, ಜೈನರ ಬೀದಿ, ಪೇಟೆ ಬೀದಿ, ಮಾರುಕಟ್ಟೆ ಹಾಗೂ ಹೊಳಲು ವೃತ್ತ ಸೇರಿದಂತೆ ಹಲವೆಡೆ ಸಂಚಾರಿಸಿ ಸ್ವಯಂ ಪ್ರೇರಿತ ಬಂದ್ ಅಚರಿಸುವಂತೆ ವರ್ತಕರಲ್ಲಿ ಮನವಿ ಮಾಡಿದರು.
ಈ ವೇಳೆ ಮಾತನಾಡಿದ ಜಯರಾಮ್, ಸರ್ಕಾರ ಶೀಘ್ರ ರೈತರ ಬೇಡಿಕೆ ಈಡೇರಿಸದಿದ್ದಲ್ಲಿ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಮುದ್ದೇಗೌಡ, ಆಟೋ ವೆಂಕಟೇಶ್, ಲಕ್ಷ್ಮಣ್, ಚೀರನಹಳ್ಳಿ ರವಿ, ಮಲ್ಲಿಗೆರೆ ವೆಂಕಟೇಶ್ ಮೊದಲಾದವರಿದ್ದರು.