ಮಂಡ್ಯದ ಹಾಲಹಳ್ಳಿಯಲ್ಲಿ ವಾಸವಾಗಿದ್ದ ಹನುಮಂತೇಗೌಡ(78) ಅವರು ನಿಧನರಾದರು
ಇತ್ತೀಚೆಗೆ ಅಶೋಕ್ ಅವರ ತಾಯಿ ವಿಮಲಾ ಅವರು ನಿಧನರಾಗಿದ್ದರು
ಮೃತರಿಗೆ ಇಬ್ಬರು ಗಂಡು ಮಕ್ಕಳು ಓರ್ವ ಪುತ್ರಿ ಇದ್ದು ಅಪಾರ ಬಂಧು ಬಳಗದವರನ್ನು ಅಗಲಿದ್ದಾರೆ, ಮೃತರ ಮಗ ಹೆಚ್. ಅಶೋಕ್ ಡಿಸಿಸಿ ಬ್ಯಾಂಕ್, ಮಂಡ್ಯ ಸಿಟಿ ಕೋ ಆಪರೇಟಿವ್ ಬ್ಯಾಂಕ್ ನಿರ್ದೇಶಕರಾಗಿ, ಹತ್ತಾರು ವರ್ಷಗಳಿಂದ ಕಾಂಗ್ರೆಸ್ ನ ಮುಖಂಡರಾಗಿ ಗುರುತಿಸಿಕೊಂಡಿದ್ದಾರೆ,
ಮೃತದೇಹವನ್ನು ಹಾಲಹಳ್ಳಿಯ ನಿವಾಸದಲ್ಲಿ ಗುರುವಾರ ಮದ್ಯಾಹ್ನದವರೆಗೂ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಿದ್ದು, ಇಂದು 3.30ಕ್ಕೆ ಗಂಟೆಗೆ ಅಂತ್ಯಸಂಸ್ಕಾರವನ್ನು ತಮ್ಮ ಹಾಲಹಳ್ಳಿ ತೋಟದಲ್ಲಿ ನೆರವೇರಲಿದೆ, ಎಂದು ಕುಟುಂಬದ ಸದಸ್ಯರಾದ ಎಚ್.ಅಶೋಕ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.