ತಾನ್ಯಾರು ಎಂದು ತಿಳಿಯಬಾರದು ಎಂದು ಹೆಸರು ಬದಲಿಕೊಂಡಿದ್ದ ಸ್ಯಾಂಟ್ರೋ ರವಿ. ಈ ಹಿಂದೆ ಮಂಡ್ಯದಲ್ಲಿ ಮಂಜುನಾಥ್ ಎಂದು ಗುರುತಿಸಿಕೊಂಡಿದ್ದ. ಕಾರು ಕಳ್ಳನಾಗಿದ್ದಾಗ ಮಂಜುನಾಥ್, ವೇಶ್ಯಾವಾಟಿಕೆಯ ಪಿಂಪ್ ಆದಾಗ ರವಿಯಾಗಿ ಬದಲಾಗಿದ್ದ. ಏಕೆಂದರೆ ಪರಿಚಯಸ್ಥರಿಗೆ ತಿಳಿಯಬಾರದು ಎಂಬುದು ಆತನ ತಂತ್ರವಾಗಿತ್ತು.
ಮಂಡ್ಯವನ್ನು ಬಿಟ್ಟ ಮೇಲೆ ತಾನು ಮಂಡ್ಯದವನು ಎಂದು ಹೇಳಿಕೊಳ್ಳದ ರವಿ. ತನ್ನ ಕಸ್ಟಮರ್ಗಳಿಗೆ ನಾನು ಮೈಸೂರು ಎಂದು ಹೇಳುತ್ತಿದ್ದ. ಸ್ಯಾಂಟ್ರೋ ರವಿ ಎಂದು ಹೆಸರಿಟ್ಟಿದ್ದು ಇವನ ಗಿರಾಕಿಗಳು. ಮೈಸೂರಿಗೆ ಬಂದಾಗ ರವಿ ಎಂದು ಹೆಸರಿಟ್ಟುಕೊಂಡ ಮಂಜುನಾಥ್. ಈ ವೇಳೆ ದಂಧೆಗೆ ಹೆಚ್ಚು ಸ್ಯಾಂಟ್ರೋ ಕಾರ್ ಬಳಕೆ ಮಾಡುತ್ತಿದ್ದ, ಹುಡುಗಿಯರನ್ನು ಕಸ್ಟಮರ್ ಬಳಿಗೆ ಸ್ಯಾಂಟ್ರೋ ಕಾರಿನಲ್ಲಿ ಕರೆದುಕೊಂಡು ಹೋಗುತ್ತಿದ್ದ.
ಸ್ಯಾಂಟ್ರೋ ರವಿ ಎಂದು ಹೆಸರು ಬಂದಿದ್ದು ಏಕೆ
2000ನೇ ಇಸವಿಯ ವೇಳೆಗೆ ಸಾಕಷ್ಟು ಹೆಸರು ಮಾಡಿದ್ದ ಸ್ಯಾಂಟ್ರೋ ಕಾರನ್ನು ಈತ ವೇಶ್ಯಾವಾಟಿಕೆ ದಂಧೆಗೆ ಹೆಚ್ಚಾಗಿ ಬಳಕೆ ಮಾಡುತ್ತಿದ್ದ. ಹೀಗಾಗಿ ರವಿಯನ್ನು ಸ್ಯಾಂಟ್ರೋ ರವಿ ಎಂದು ಕಸ್ಟಮರ್ಗಳು ಕರೆಯುತ್ತಿದ್ದರು. ಸ್ಯಾಂಟ್ರೋ ರವಿ ಕೇವಲ ಪಿಂಪ್ ಮಾತ್ರವಲ್ಲ, ಸ್ಯಾಂಟ್ರೋ ರವಿ ಆಗುವ ಮೊದಲು ಮಂಜುನಾಥ್ ಆಗಿದ್ದ, ಕಾರು ಕಳ್ಳತನ ಮಾಡಿ ಮಂಡ್ಯದಲ್ಲಿ ಶೋಕಿ ಮಾಢುತ್ತಿದ್ದ, ಕಾರು ತೋರಿಸಿ ಕಾಲೇಜು ಹುಡುಗಿಯರನ್ನು ಪಟಾಯಿಸುತ್ತಿದ್ದ ಸ್ಯಾಂಟ್ರೋ ರವಿ, ತಂದೆ ಅಬಕಾರಿ ಇಲಾಖೆಯಲ್ಲಿದ್ದ ಕಾರಣ ಅವನ್ನದ್ದೆ ಕಾರು ಎಂದು ಜನ ಅಂದುಕೊಳ್ಳುತ್ತಿದ್ದರು.
ಪ್ರತಿ ವಾರ ಒಂದೊಂದು ಕಾರು ಓಡಾಡುತ್ತಿದ್ದ ರವಿ, ಒಮ್ಮೆ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದ, ಒಂದು ಸಲ ಮನೆಗೆ ನುಗ್ಗಿದ್ದ ಪೊಲೀಸರು ಸ್ಯಾಂಟ್ರೋ ರವಿಯನ್ನು ಹೊದ್ದು ಕರೆದುಕೊಂಡು ಹೋಗಿದ್ದರು. ಕಾರು ಕಳ್ಳತನ ವಿಚಾರದಲ್ಲಿ ಮನೆಗೆ ನುಗ್ಗಿ ಕರೆದು ಕೊಂಡು ಹೋಗಿದ್ದ ಪೊಲೀಸರಿಂದ ಈತ ಕಾರು ಕಳ್ಳತನ ಪ್ರಕರಣ ಬೆಳಕಿಗೆ ಬಂದಿತ್ತು. ಅಲ್ಲಿಯವರೆಗೆ ಇವನದ್ದೇ ಕಾರುಗಳು ಎಂದು ಕೊಂಡಿದ್ದ ಜನರು. ಆಗ ಸ್ಯಾಂಟ್ರೋ ರವಿ ಇದ್ದದ್ದೇ ಬೇರೆ ಈಗ ಇರೋದೆ ಬೇರೆ ಅಂದು ಕೊಂಡರು.
ಬೋಳುತಲೆ ರವಿ ನಂತರ ವಿಗ್ ಮೊರೆ ಹೋದ
ಆಗ ಇವನನ್ನು ನೋಡಿದವರು ಈಗ ಅವನ್ನು ಗುರುತು ಹಿಡಿಯಲು ಸಾಧ್ಯವೇ ಇಲ್ಲ, ಕೈಗೆ ಕಾಸು ಬಂದ ಮೇಲೆ ತನ್ನ ಸೌಂದರ್ಯಕ್ಕೆ ಹೆಚ್ಚು ಹೊತ್ತು ಕೊಡುತ್ತಿದ್ದ ರವಿ, ಆಗ ತಲೆ ಕೂದಲು ಉದುರಿ ಅಡ್ಡಾದಿಡ್ಡಿ ಓಡಾಡುತ್ತಿದ್ದ ರವಿ. ಈಗ ತಲೆಗೆ ವಿಗ್ ಹಾಕಿಕೊಂಡು, ಕನ್ನಡಕ ಹಾಕಿಕೊಂಡು ಟಿಪ್ ಟಾಪ್ಗಿ ಕಾಣುವಂತೆ ಬದಲಾಗಿದ್ದಾನೆ.
ಸ್ಯಾಂಟ್ರೋ ರವಿ ವಿಚಾರದಲ್ಲಿ ಬಗೆದಷ್ಟು ವಿಚಾರಗಳು ಬೆಳಕಿಗೆ ಬರುತ್ತಿವೆ, ಸ್ಯಾಂಟ್ರೋ ರವಿಗೆ ಎರಡಲ್ಲಾ ನಾಲ್ಕು ಮದುವೆಗಳಾಗಿವೆ ಎಂಬ ವಿಚಾರ ಬೆಳಕಿಗೆ ಬಂದಿವೆ
ಮಂಡ್ಯದ ಹುಡುಗಿಯನ್ನೆ ಮದುವೆಯಾಗಿದ್ದ
2000ನೇ ಇಸವಿಯಲ್ಲಿ ಮಂಡ್ಯದ ರೂಪ ಎನ್ನುವ ಯುವತಿಯನ್ನು ಪ್ರೀತಿಸಿದ್ದ ರವಿ,
ಪಿಯುಸಿ ಓದುತ್ತಿದ್ದ ಆಕೆಯನ್ನೆ ಮದುವೆಯಾಗಿದ್ದ. ಬಡವರ ಮನೆಯ ರೂಪ ತುಂಬಾ ಸುಂದರವಾಗಿದ್ದಳು. ಕದ್ದ ಕಾರಿನಿಂದ ರೂಪಳನ್ನು ಬಲೆಗೆ ಬೀಳಿಸಿಕೊಂಡಿದ್ದ ಆತ, ರೂಪಳನ್ನು ಮೈಸೂರಿಗೆ ಕರೆದುಕೊಂಡು ಹೋಗಿದ್ದ ಆಗ ಹೋದ ರೂಪ ನಿಗೂಢವಾಗಿ ನಾಪತ್ತೆಯಾದಳು. ಇಲ್ಲಿಯವರೆಗೆ ರೂಪ ಏನಾದಳು ಎಂದು ಯಾರಿಗೂ ಗೊತ್ತಿಲ್ಲ.
ರೂಪಳನ್ನು ಸ್ಯಾಂಟ್ರೋ ರವಿ ಏನು ಮಾಡಿದ ಎಂದು ಹಲವು ಅನುಮಾನಗಳಿಗೆ ಕಾರಣವಾಗಿವೆ, ಸ್ಯಾಂಟ್ರೋ ರವಿ ಜೊತೆ ಹೋದ ಮೇಲೆ ರೂಪ ಅವರ ಪೋಷಕರು ಮಂಡ್ಯ ಖಾಲಿ ಮಾಡಿದ್ದರು. ಇದಾದ ನಂತರ 2007ರಲ್ಲಿ ಮೈಸೂರಿನ ಆಫೀಸರ್ ಮಗಳ ಮೇಲೆ ಸ್ಯಾಂಟ್ರೋ ರವಿ ಕಣ್ಣು ಬಿದ್ದಿತ್ತು. ಅಪ್ರಾಪ್ತ ಬಾಲಕಿಯಾಗಿದ್ದ ಆಫೀಸರ್ ಮಗಳನ್ನು ಪ್ರೀತಿಯ ಬಲೆಯಲ್ಲಿ ಬೀಳಿಸಿಕೊಂಡಿದ್ದ. ಬಳಿಕ ಆಕೆಯನ್ನು ಕರೆದುಕೊಂಡು ಹೋಗಿ ಮದುವೆಯಾಗಲು ಯೋಜನೆ ಹಾಕಿಕೊಂಡಿದ್ದ ರವಿ, ಆಗ ಅಪ್ರಾಪ್ತ ಬಾಲಕಿಯ ಅಪಹರಣ ಪ್ರಕರಣದಲ್ಲಿ ಪೊಲೀಸರಿಗೆ ತಗಲಾಕಿಕೊಂಡದ್ದ, ಬಳಿಕ ಸ್ಯಾಂಟ್ರೋ ರವಿಯ ಮೇಲೆ ಕೇಸ್ ಆಗಿ, ಇದೇ ವಿಚಾರವಾಗಿ ಸ್ಯಾಂಟ್ರೋ ರವಿ ಜೈಲು ಸೇರಿದ್ದ.