ನಾಗಮಂಗಲ.ಐ.ಪಿ.ಎಲ್. ಗೆಮ್ ಆಡಿ 8 ಲಕ್ಷಕ್ಕೂ ಅಧಿಕ ಸಾಲ ಮಾಡಿಕೊಂಡು ಹೆಂಡತಿಗೆ ಕಿರುಕುಳ ನೀಡಿದ್ದಲ್ಲದೆ, ಮತ್ತೊಂದು ಅಕ್ರಮ ಸಂಬಂಧ ಹೊಂದಿದ್ದ ನರಸಿಂಹ (35 ವರ್ಷ) ಎಂಬ ನಾಗಮಂಗಲ ಪಟ್ಟಣ 8ನೇ ವಾರ್ಡ್ ಪೇಟೆಹೊಲ ರಸ್ತೆಯಲ್ಲಿ ಸ್ವಂತ ಮನೆಯಲ್ಲಿ ವಾಸವಿದ್ದ ವ್ಯಕ್ತಿ ಇಂದು ಮಧ್ಯಾಹ್ನ 2 ಗಂಟೆಗೆ ತನ್ನ ಹೆಂಡತಿ ಕೀರ್ತನ (23 ವರ್ಷ), ಮೂರು ವರ್ಷದ ಜಯಸಿಂಹ, ರಿಷಿಕಾ ಎಂಬ ಮಗ ಒಂದು ವರ್ಷದ ಮಗು ಸೇರಿದಂತೆ ಮೂರು ಜನರನ್ನು ವಿಷ ಕುಡಿಸಿ ಸಾಯಿಸಿದ್ದಾನೆ.
ತಾನು ಕೂಡ ವಿಷ ಸೇವಿಸಿ ಆಸ್ಪತ್ರೆಗೆ ಸೇರಿರುವ ಘಟನೆ ನಾಗಮಂಗಲ ಪಟ್ಟಣದ ಪೊಲೀಸ್ ಠಾಣಾ ಸಂಭವಿಸಿದೆ.
ತಾಲ್ಲೂಕಿನ ತೆಂಗಿನಭಾಗ ಗ್ರಾಮದ ಸ್ವಾಮಿ ರವರ ಸುಪುತ್ರ ನರಸಿಂಹ, ತನ್ನದೇ ಒಂದು ಕಟಿಂಗ್ ಶಾಪ್ ಅಂಗಡಿಯನ್ನು ಇಟ್ಟುಕೊಂಡು ತಾಲ್ಲೂಕಿನ ಬಸರಾಳು ಹೋಬಳಿಯ ಕಂಬದಹಳ್ಳಿ ಗ್ರಾಮದ ಕೀರ್ತನ ಯುವತಿಯನ್ನು ಮದುವೆಯಾಗಿ ಎರಡು ಮುದ್ದಾದ ಮಕ್ಕಳನ್ನು ಹೊಂದಿದ್ದರು.
ಇತ್ತೀಚೆಗೆ ಅತಿಯಾದ ಸಾಲ ಮತ್ತು ಕುಟುಂಬ ಕಲಹದಿಂದ ಈ ಘಟನೆ ಸಂಭವಿಸಿದೆ ಎಂದು ಮಹಿಳೆ ಕೀರ್ತನವರ ಕುಟುಂಬದವರ ನೋವಿನ ನುಡಿ, ಅವರ ಅಕ್ರಂದನ ಮುಗಿಲುಮುಟ್ಟಿತ್ತು.
ಮಹಿಳೆ ಕೀರ್ತನರವರ ತಂದೆ ಶಿವನಂಜು ಮಾತನಾಡಿ ವರದಕ್ಷಿಣೆ ಕಿರಿಕುಳವನ್ನು ಪದೇ ಪದೇ ನೀಡುತ್ತಿದ್ದ 8 ಲಕ್ಷಕ್ಕೂ ಹೆಚ್ಚು ಸಾಲ ಮಾಡಿ ನ್ಯಾಯ ಪಂಚಾಯತಿ ಎಲ್ಲಾ ನಡೆದಿತ್ತು. ಆದರೂ ಕೂಡ ನಾನು ಹಣವನ್ನು ನೀಡಿದ್ದೆ, ನರಸಿಂಹ ಆಕ್ರಮ ಸಂಬಂಧ ಹೊಂದಿದ್ದ, ಇದರಿಂದ ನನ್ನ ಮಗಳು ನೊಂದಿದ್ದಳು ಎಂದು ತಿಳಿಸಿದ್ದಾರೆ.
ಈ ಬಗ್ಗೆ ನಾಗಮಂಗಲ ಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ತನಿಖೆಯನ್ನು ಚುರುಕುಗೊಳಿಸಿದ್ದಾರೆ.