ಶ್ರೀರಂಗಪಟ್ಟಣ ತಾಲ್ಲೂಕಿನ ಕೆ.ಶೆಟ್ಟಹಳ್ಳಿ ಗ್ರಾಮದಲ್ಲಿ ಶಾಸಕರ ಅನುದಾನದ 5 ಲಕ್ಷ ರೂ. ವೆಚ್ಚದ ಮಸೀದಿ ನಿರ್ಮಾಣದ ಕಾಮಗಾರಿಗೆ ಶಾಸಕ ರವೀಂದ್ರ ಶ್ರೀಕಂಠಯ್ಯ ಇಂದು ಚಾಲನೆ ನೀಡಿದರು.
ಕೆ.ಶೆಟ್ಟಹಳ್ಳಿಯ ಮುಸಲ್ಮಾನ ಬಾಂಧವರು ಮಸೀದಿ ನಿರ್ಮಾಣಕ್ಕೆ ಮುಂದಾಗಿದ್ದರು.ಅದಕ್ಕೆ ನಾನೂ ಕೂಡ ನನ್ನ ಶಾಸಕರ ಅನುದಾನದಲ್ಲಿ 5 ಲಕ್ಷ ರೂ.ನೀಡುತ್ತಿದ್ದು,ಉತ್ತಮ ಗುಣಮಟ್ಟದ ಕಾಮಗಾರಿ ಮಾಡಿಸಲು ಪ್ರಯತ್ನ ಮಾಡುತ್ತೇನೆ ಎಂದರು.
ಈ ಸಂದರ್ಭದಲ್ಲಿ ಕೆ.ಶೆಟ್ಟಹಳ್ಳಿಯ ಮುಸಲ್ಮಾನ ಬಾಂಧವರು ಹಾಜರಿದ್ದರು.