Saturday, May 18, 2024

ಪ್ರಾಯೋಗಿಕ ಆವೃತ್ತಿ

ಡಬಲ್ ಮರ್ಡರ್ ಆರೋಪಿ ಜೊತೆ ವೇದಿಕೆ ಹಂಚಿಕೊಂಡ ಮೋದಿ : ಕಾಂಗ್ರೆಸ್ – ಜೆಡಿಎಸ್ ಕಿಡಿ

ಈ ಹಿಂದೆ ರೌಡಿಶೀಟರ್ ಗೆ ಕೈ ಮುಗಿದಿದ್ದ ಚುನಾವಣಾ ಜೀವಿ ನರೇಂದ್ರ ಮೋದಿ, ಇದೀಗ ಮತ್ತೊಬ್ಬ ರೌಡಿ ಶೀಟರ್ ಜೊತೆಗೆ ವೇದಿಕೆ ಹಂಚಿಕೊಂಡಿದ್ದಾರೆ. ಅವರು ಪ್ರಧಾನಿ ಹುದ್ದೆಯ ಎಲ್ಲಾ ಘನತೆಯನ್ನು ಮಣ್ಣುಪಾಲು ಮಾಡುತ್ತಿದ್ದಾರೆ. ಪ್ರಧಾನಿಯ ಗಮನಕ್ಕೆ ಬರದೆ ರೌಡಿಯೊಬ್ಬ ಇಷ್ಟೊಂದು ಹತ್ತಿರ ಸುಳಿಯಲು ಸಾಧ್ಯವೆ?. ಎಂದು ಜೆಡಿಎಸ್ ಪಕ್ಷ ಕಿಡಿಕಾರಿದೆ.

“>

ಬಿಜೆಪಿ ರೌಡಿ ಮೋರ್ಚಾದಿಂದ ರಾಜ್ಯಕ್ಕೆ ಏನು ಅಪಾಯ ಕಾದಿದಿಯೊ. ಕ್ರಿಮಿನಲ್‌ಗಳನ್ನು ಈ ರೀತಿಯಾಗಿ ಗುಡ್ಡೆ ಹಾಕುತ್ತಿರುವ ಬಿಜೆಪಿಯ ಬಗ್ಗೆ ಡಿಜಿಪಿ ಕರ್ನಾಟಕ ಪೊಲೀಸ್ ಎಚ್ಚರವಾಗಿರಲಿ. ಚುನಾವಣೆ ಗೆಲ್ಲಲು ಬಿಜೆಪಿ ಯಾವ ಮಟ್ಟಕ್ಕೆ ಇಳಿಯಲು ಹೇಸುವುದಿಲ್ಲ ಎಂಬುವುದು ಇಡೀ ಕರುನಾಡಿಗೆ ತಿಳಿದಿದೆ ಎಂದು ಜೆಡಿಎಸ್ ಟ್ವೀಟ್ ಮೂಲಕ ಆಕ್ರೋಶ ಹೊರ ಹಾಕಿದೆ.

“>

ರೌಡಿಶೀಟರ್ ಗಳು, ಕೊಲೆ ಆರೋಪಿಗಳು ಪ್ರಧಾನಿಯೊಂದಿಗೆ ವೇದಿಕೆ ಏರುವ ಅವಕಾಶ ಇರುವುದು ಬಿಜೆಪಿಯಲ್ಲಿ ಮಾತ್ರ. ಇಲ್ಲಿ ಪ್ರಧಾನಿ ಮೋದಿಯವರಿಗೆ ಸನ್ಮಾನ ಮಾಡುತ್ತಿರುವುದು ರೌಡಿಶೀಟರ್, ಡಬಲ್ ಮರ್ಡರ್ ಆರೋಪಿ ಮುದ್ದು ಕೃಷ್ಣ ಅಲಿಯಾಸ್ ಮುದ್ದು. ಮೋದಿಯವರ ಕಿರೀಟಕ್ಕೆ ಬಿಜೆಪಿಯ ಮತ್ತೊಬ್ಬ ರೌಡಿಶೀಟರ್ ಗರಿ ಸೇರ್ಪಡೆ ಎಂದು ಕಾಂಗ್ರೆಸ್ ಕೆಂಡಕಾರಿದೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!