Thursday, May 16, 2024

ಪ್ರಾಯೋಗಿಕ ಆವೃತ್ತಿ

ಮಂಡ್ಯ| ವಿಕಲಚೇತನರಿಗೆ ಯಂತ್ರಚಾಲಿತ ವಾಹನ ವಿತರಣೆ

ಮಂಡ್ಯ ಸಂಸದೆ ಸಮಲತಾ ಅಂಬರೀಶ್ ಅವರು ಇಂದು ಜಿಲ್ಲಾಧಿಕಾರಿ ಕಛೇರಿ ಮುಂಭಾಗದಲ್ಲಿ ಸಂಸದರ ನಿಧಿ ಅನುದಾನದಿಂದ 10 ಮಂದಿ ವಿಕಲ ಚೇತನರಿಗೆ ಯಂತ್ರಚಾಲಿತ ವಾಹನವನ್ನು ವಿತರಣೆ ಮಾಡಿದರು.

ನಂತರ ಮಾತನಾಡಿದ ಅವರು, ಸಂಸದರ ಅನುದಾನವನ್ನು ವಿಶೇಷ ಚೇತನರಿಗೆ ಬಳಸುವುದು ತುಂಬ ಅಪರೂಪ. ನಮ್ಮ ರಾಜ್ಯದ ಮಂಡ್ಯದಲ್ಲಿ ಸಂಸದರ ಅನುದಾನವನ್ನು ವಿಕಲ ಚೇತನರಿಗೆ ಹೆಚ್ಚು ಬಳಸಿದ್ದೇವೆ,  ಸಂಸದರಾಗಿನಿಂದ ಇಲ್ಲಿಯವರೆಗೆ 70 ವಾಹನವನ್ನು ವಿಕಲ ಚೇತನರಿಗೆ ವಿತರಿಸಿದ್ದೇವೆ ಎಂದರು.

ಇದೇ ಸಂದರ್ಭದಲ್ಲಿ ವಿಕಲಚೇತನ ಹಾಗೂ ಹಿರಿಯ ನಾಗರಿಕರ ಅಧಿಕಾರಿ ಆರ್.ರೋಹಿತ್, ಜಿ.ಪಂ. ಮಾಜಿ ಅಧ್ಯಕ್ಷ ವಿವೇಕಾನಂದ, ಸಿನಿಮಾ ನಿರ್ಮಾಪಕ ರಾಕಲೈನ್ ವೆಂಕಟೇಶ್, ಮುಖಂಡರಾದ ಮದನ್, ಅರವಿಂದ ಕುಮಾರ್, ಬೇಲೂರು ಸೋಮಶೇಖರ್, ಹನಕೆರೆ ಶಶಿಕುಮಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!