”ನಂದಿನಿ” ಎಂದರೆ ಬರೀ ಹಾಲಲ್ಲ, ರಾಜ್ಯದ ರೈತರ ಬೆವರು, ಬದುಕು, ಭವಿಷ್ಯ. ನಂದಿನಿಯನ್ನು ನಂಬಿ ಬದುಕುವ ಕೋಟ್ಯಂತರ ರೈತರ ಬೆನ್ನಿಗೆ ಚೂರಿ ಹಾಕಲು ಹೊರಟಿದ್ದಾರೆ ಈ ರಾಜ್ಯದ ದ್ರೋಹಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ, ನೀವೆಷ್ಟೇ ಗುಲಾಮಗಿರಿ ಮಾಡಿದರೂ ನಿಮಗೆ ಮಣೆ ಹಾಕುವುದಿಲ್ಲ.ರಾಜ್ಯದ ರೈತರ ಹಿತ ಬಲಿ ಕೊಡುತ್ತಿರುವುದು ಅಕ್ಷಮ್ಯ ಎಂದು ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ.
“ನಂದಿನಿ” ಎಂದರೆ ಬರೀ ಹಾಲಲ್ಲ, ರಾಜ್ಯದ ರೈತರ ಬೆವರು, ಬದುಕು, ಭವಿಷ್ಯ.
ನಂದಿನಿಯನ್ನು ನಂಬಿ ಬದುಕುವ ಕೋಟ್ಯಂತರ ರೈತರ ಬೆನ್ನಿಗೆ ಚೂರಿ ಹಾಕಲು ಹೊರಟಿದ್ದಾರೆ ಈ ರಾಜ್ಯದ ದ್ರೋಹಿ ಮುಖ್ಯಮಂತ್ರಿ.@BSBommai ಅವರೇ, ನೀವೆಷ್ಟೇ ಗುಲಾಮಗಿರಿ ಮಾಡಿದರೂ ನಿಮಗೆ ಮಣೆ ಹಾಕುವುದಿಲ್ಲ.
ರಾಜ್ಯದ ರೈತರ ಹಿತ ಬಲಿ ಕೊಡುತ್ತಿರುವುದು ಅಕ್ಷಮ್ಯ
— Karnataka Congress (@INCKarnataka) April 9, 2023
“>
ನಂದಿನಿಯಾಗಲಿ, ಅಮೂಲ್ ಆಗಲಿ ಎರಡೂ ಕೋ ಆಪರೇಟಿವ್ ತತ್ವದಲ್ಲಿ ಹುಟ್ಟಿದವು ಹಾಗೂ ಅದೇ ತತ್ವದಲ್ಲಿ ಕಾರ್ಯಚರಿಸುವಂತವೇ ಹೊರತು ಕಾರ್ಪೊರೇಟ್ ತತ್ವದಲ್ಲಿ ಅಲ್ಲ. ಆದರೆ ಕಾರ್ಪೊರೇಟ್ ಕಂಪೆನಿಯ ರೀತಿ ಅಮೂಲ್ ದಾಳಿ ಮಾಡುತ್ತಿರುವ ಹಿಂದೆ ಕರ್ನಾಟಕದ ಕೋ ಅಪರೇಟಿವ್ ವ್ಯವಸ್ಥೆಯನ್ನ, ಸಣ್ಣ ರೈತರ ಬದುಕನ್ನು ನಾಶಗೊಳಿಸುವ ಹುನ್ನಾರ ಅಡಗಿದೆ ಎಂದು ಕಾಂಗ್ರೆಸ್ ಕಿಡಿಕಾರಿದೆ.