ಕರ್ನಾಟಕದ ಸಂಸ್ಕೃತಿ, ಹಿರಿಮೆ – ಗರಿಮೆಯನ್ನು ದೇಶಕ್ಕೆ ಪರಿಚಯಿಸುವ ಉದ್ದೇಶದಿಂದ ಹರಿಯಾಣ ರಾಜ್ಯದ ಕೈತಲ್ ನಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಭಾವೈಕ್ಯತಾ ಶಿಬಿರದಲ್ಲಿ ಮಂಡ್ಯ ಪಿಇಎಸ್ ಕಾಲೇಜಿನ 10 ವಿದ್ಯಾರ್ಥಿಗಳ ತಂಡವು ರಾಷ್ಟ್ರೀಯ ಸೇವಾ ಯೋಜನಾ ಕಾರ್ಯಕ್ರಮಾಧಿಕಾರಿ ಕ್ಯಾತೇಗೌಡ ಎಸ್.ಪಿ ಇವರ ನೇತೃತ್ವದಲ್ಲಿ ಭಾಗವಹಿಸಿದೆ.
ಇಂದಿನಿಂದ (ಜೂ.14) ಆರಂಭವಾಗಿರುವ ಶಿಬಿರವು ಜೂ.20ರವರೆಗೆ ಜರುಗಲಿದೆ. ಈ ಶಿಬಿರದಲ್ಲಿ ದೇಶದ ಒಟ್ಟು 12 ರಾಜ್ಯಗಳ ವಿದ್ಯಾರ್ಥಿಗಳ ತಂಡಗಳು ಭಾಗವಹಿಸುತ್ತಿದ್ದು, ತಮ್ಮ ರಾಜ್ಯಗಳ ಸಂಸ್ಕೃತಿ, ಆಚಾರ – ವಿಚಾರಗಳನ್ನು ಪರಿಚಯಿಸಲಿದೆ. ಅದೇ ಮಂಡ್ಯದ ಪಿಇಎಸ್ ಕಾಲೇಜು ತಂಡದ 5 ಮಂದಿ ವಿದ್ಯಾರ್ಥಿಗಳು ಹಾಗೂ 5 ಮಂದಿ ವಿದ್ಯಾರ್ಥಿನಿಯರು ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿ, ಈ ನೆಲ ಕಲೆ, ಸಂಸ್ಕೃತಿ, ಆಚಾರ- ವಿಚಾರಗಳಲ್ಲಿ ಅಲ್ಲಿ ಪ್ರದರ್ಶನ ಮಾಡಲಿದ್ದಾರೆ.