ಬೆಂಗಳೂರಿನ ಕೆ.ಆರ್.ಮಾರ್ಕೆಟ್ ಬಳಿಯ ಸಿರಸಿ ಸರ್ಕಲ್ ಬಳಿ ಸೂಟು ಬೂಟು ಹಾಕಿದ ವ್ಯಕ್ತಿಯೊಬ್ಬ ನೋಟುಗಳನ್ನು ಎರಚಿರುವ ವೀಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ನೋಡಿದರೆ ಸ್ಥಿತಿವಂತನಂತೆ ಕಾಣುವ ಸೂಟು ಬೂಟು ಹಾಕಿದ ವ್ಯಕ್ತಿಯೊಬ್ಬ ತನ್ನ ಕೈ ಚೀಲದಲ್ಲಿಕ್ಕೆ ಕೈ ಹಾಕಿ, ನೋಟುಗಳನ್ನು ಎರಚುತ್ತಾನೆ. ಮತ್ತೆ ಪ್ಲೈಓವರ್ ನ ಇನ್ನೊಂದು ಬದಿಗೆ ಹೋಗಿ ಹಣವನ್ನು ಎರಚುವುದು ವೀಡಿಯೋದಲ್ಲಿ ದಾಖಲಾಗಿದೆ. ಎರಚಿದ ಹಣವನ್ನು ಹಾಯ್ದುಕೊಳ್ಳಲು ಜನ ಮುಗಿಬಿದ್ದಿದ್ದರಿಂದ ಕೆಲ ಸಮಯ ಪ್ಲೈಓವರ್ ಕೆಳಗಡೆ ಟ್ರಾಫಿಕ್ ಜಾಮ್ ಸಂಭವಿಸಿತು.
ಕೆಲವು ಪ್ರತ್ಯೇಕ್ಷದರ್ಶಿಗಳು ಹೇಳಿದ ಪ್ರಕಾರ, ಬೈಕ್ ನಲ್ಲಿ ಬಂದಿದ್ದ ಆತ ಎರಚಿದ್ದು ಕೇವಲ ಮೂರು ಸಾವಿರ ರೂ. ಅಷ್ಟೆ, ಅವು ಕೂಡ 10 ರೂ.ಮುಖಬೆಲೆಯ ನೋಟುಗಳು ಎನ್ನಲಾಗಿದೆ. ಹಣ ಎರಚಿದ ವ್ಯಕ್ತಿಯನ್ನು ಅರುಣ್ ಎಂದು ಗುರುತಿಸಲಾಗಿದ್ದು, ಈತ ತನ್ನ ಹೊಟ್ಟೆಯ ಭಾಗದಲ್ಲಿ ಗಡಿಯಾರವನ್ನು ನೇತು ಹಾಕಿಕೊಂಡಿದ್ದಾನೆ. ಈತ ನಿಜಕ್ಕೂ ಆರೋಗ್ಯವಾಗಿದ್ದನೋ ಅಥವಾ ಮಾನಸಿಕ ಅಸ್ವಸ್ಥನೋ ಅಥವಾ ದುಡ್ಡಿನ ಬಗ್ಗೆ ಬೇಸತ್ತು ಹಣವನ್ನು ಎರಚಿದ್ದಾನೋ ಎಂಬುದಿ ಇನ್ನಷ್ಟೇ ತಿಳಿದು ಬರಬೇಕಿದೆ. ಒಟ್ಟಿನಲ್ಲಿ ಟ್ರಾಫಿಕ್ ಜಾಮ್ ಗೆ ಕಾರಣನಾದ ಆತನನ್ನು ಪೊಲೀಸರು ಹುಡುಕುತ್ತಿದ್ದಾರೆ.