ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಪಂಚರತ್ನ ಯಾತ್ರೆ ನೆಲಮಂಗಲ ತಾಲೂಕಿನಲ್ಲಿ ಸಾಗುತ್ತಿದೆ. ಗುರುವಾರ ಬೆಳಗ್ಗೆ ಕುಮಾರಸ್ವಾಮಿ ಅವರು ಶಾಲಾ ಮಕ್ಕಳೊಂದಿಗೆ ಬೆಳಗಿನ ಉಪಹಾರ ಸೇವಿಸಿದ್ದಾರೆ.
ನೆಲಮಂಗಲ ವಿಧಾನಸಭೆ ಕ್ಷೇತ್ರದ ಲಕ್ಕೂರು ಗ್ರಾಮದಿಂದ ತುಮಕೂರು ನಗರಕ್ಕೆ ಹೊರಡುವ ಮಾರ್ಗದಲ್ಲಿ ಸಮಾಜ ಕಲ್ಯಾಣ ಇಲಾಖೆಯ ವಿಧ್ಯಾರ್ಥಿ ನಿಲಯಕ್ಕೆ ಭೇಟಿ ನೀಡಿ ಮಕ್ಕಳ ಜತೆ ಬೆಳಗಿನ ಉಪಾಹಾರ ಸೇವಿಸಿದೆ. ಶಾಸಕರಾದ ಡಾ.ಶ್ರೀನಿವಾಸ ಮೂರ್ತಿ ಅವರಿದ್ದರು.#ಪಂಚರತ್ನ_ರಥಯಾತ್ರೆ #ನೆಲಮಂಗಲ pic.twitter.com/Ti1TkSSIGr
— ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy (@hd_kumaraswamy) December 1, 2022
ಈ ವೇಳೆ, ಹಾಸ್ಟೆಲ್ಗೆ ಬಂದ ಮಾಜಿ ಮುಖ್ಯಮಂತ್ರಿ, ಮಕ್ಕಳು ಶಾಲೆಗೆ ಹೋಗದಂತೆ ತಡೆದು, ಹೊರಗಿನಿಂದ ರಾಗಿ ರೊಟ್ಟಿ, ಕಾಳು ಸೊಪ್ಪಿನ ಪಲ್ಯ, ಪೊಂಗಲ್ ತರಿಸಿ, ತಿಂಡಿ ತಿಂದಿದ್ದ ಮಕ್ಕಳಿಗೆ ಮತ್ತೆ ಉಪಹಾರ ತಿನ್ನಿಸಿದ್ದಾರೆ. ಅವರೊಂದಿಗೆ ತಾವೂ ಉಪಹಾರ ಸೇವಿಸಿದ್ದಾರೆ. ನೆಲಮಂಗಲ ವಿಧಾನಸಭೆ ಕ್ಷೇತ್ರದ ಲಕ್ಕೂರು ಗ್ರಾಮದಿಂದ ತುಮಕೂರು ನಗರಕ್ಕೆ ಹೊರಡುವ ಮಾರ್ಗದಲ್ಲಿ ಸಮಾಜ ಕಲ್ಯಾಣ ಇಲಾಖೆಯ ವಿಧ್ಯಾರ್ಥಿ ನಿಲಯಕ್ಕೆ ಭೇಟಿ ನೀಡಿ ಮಕ್ಕಳ ಜತೆ ಬೆಳಗಿನ ಉಪಾಹಾರ ಸೇವಿಸಿದೆ. ಶಾಸಕರಾದ ಡಾ.ಶ್ರೀನಿವಾಸ ಮೂರ್ತಿ ಅವರಿದ್ದರು. ಅವರು ಮಕ್ಕಳೊಂದಿಗೆ ಉಪಹಾರ ಸೇವಿಸುವ ವೇಳೆಗೆ ಸಮಯ 11 ಗಂಟೆಯಾಗಿತ್ತು.