ಮಂಡ್ಯ ಕ್ಷೇತ್ರಕ್ಕೆ ಬಂದು ಒಂದಷ್ಟು ಜನರನ್ನು ಸೇರಿಸಿ ಫೋಟೋ ತೆಗೆಸಿಕೊಂಡು ಮಾಧ್ಯಮಗಳಲ್ಲಿ ಪ್ರಚಾರ ಪಡೆದರೆ ಏನು ಆಗಲ್ಲ ಎಂದು ಸಂಸದೆ ಸುಮಲತಾ ಅಂಬರೀಶ್ ಮೈಸೂರು ಸಂಸದ ಪ್ರತಾಪ್ ಸಿಂಹ ಅವರ ಹೆಸರೇಳದೆ ವ್ಯಂಗವಾಡಿದರು.
ಅವರಿಂದಲೇ ಕೆಲಸ ಆಯ್ತು ಅಂದ್ರೆ ನಾನು ಏನು ಮಾಡೋಕು ಆಗಲ್ಲ.ನಾನು ಎಲ್ಲವನ್ನೂ ಫೋಟೋ ತೆಗೆದುಕೊಂಡು ಮೀಡಿಯಾ ಮುಂದೆ ಬರೋಕೂ ಆಗಲ್ಲ. ಮೀಡಿಯಾ ಮುಂದೆ ಬಂದು ಕೂತರೆ ಕೆಲಸ ಆಗಲ್ಲ ಎಂದು ಟೀಕಿಸಿದರು.
ನನಗೆ ಯಾರ ಮೇಲೂ ಕೋಲ್ಡ್ ವಾರ್ ಇಲ್ಲ.ನನಗೆ ಕ್ರೆಡಿಟ್ ತೆಗೆದುಕೊಳ್ಳುವ ಅನಿವಾರ್ಯವೂ ಇಲ್ಲ. ಎಲ್ಲಾ ಕೆಲಸವನ್ನು ಅವರೇ ಮಾಡಿಸುತ್ತಿದ್ದಾರೆ ಎಂದ್ರೂ ನಂಗೆ ಬೇಸರ ಇಲ್ಲ.
ಹೆದ್ದಾರಿಯ ವಿಚಾರದಲ್ಲಿ ನಮ್ಮ ಜನರಿಗೆ ತೊಂದರೆ ಆದ್ರೆ ನಾನು ಹೋರಾಟ ಮಾಡುತ್ತೇನೆ.ಕೆಹೆಚ್ಪಿ ಕಾಲೋನಿಯ ರಸ್ತೆಯ ಬಗ್ಗೆ ಈ ಹಿಂದೆ ಅಧಿಕಾರಿಗಳಿಗೆ ಹೇಳಿದ್ದೆ.ದಿಶಾ ಸಭೆಯಲ್ಲಿ ಈ ರಸ್ತೆ ಸರಿ ಪಡಿಸಲು ಸೂಚನೆ ನೀಡಿದ್ದೆ. ಆ ಕಾಮಗಾರಿ ಪೂರ್ಣವಾಗುವಾಗ ಅವರು ಅಲ್ಲಿಗೆ ಬಂದಿದ್ದಾರೆ ಎಂದರು.
ನನ್ನ ಮಗನಿಗೆ ಟಿಕೆಟ್ ಬೇಡಿಕೆ ಇಟ್ಟಿಲ್ಲ
ನನ್ನ ಮಗ ಅಭಿಗೆ ಟಿಕೆಟ್ ನೀಡುವಂತೆ ಯಾವ ಪಕ್ಷದ ಮುಂದೆಯೂ ಬೇಡಿಕೆ ಇಟ್ಟಿಲ್ಲ. ಮುಂದೆಯೂ ಮಗನಿಗಾಗಿ ಟಿಕೆಟ್ ಬೇಡಿಕೆ ಇಡುವುದಿಲ್ಲ.ಈಗ ಅಭಿ ಸಿನಿಮಾ ಕ್ಷೇತ್ರದಲ್ಲಿ ಬೆಳೆಯುತ್ತಾ ಇದ್ದಾನೆ.
ನಾನು ಅವನಿಗಾಗಿ ರಾಜಕೀಯದ ಸ್ಟೂಲ್ ಹಾಕಿಕೊಡಲ್ಲ.
ಅವನಿಗೆ ಬೇರೆ ಪಕ್ಷದಿಂದ ಆಫರ್ ಬಂದಿರೋದು ನಿಜ.
ಅದನ್ನು ನಿರ್ಧಾರ ಮಾಡುವುದು ಅಭಿಷೇಕ್ಗೆ ಬಿಟ್ಟಿದ್ದು.ಈ ವಿಚಾರದಲ್ಲಿ ನಾನು ನಿರ್ಧಾರ ಮಾಡುವುದಿಲ್ಲ ಎಂದರು.