Saturday, May 18, 2024

ಪ್ರಾಯೋಗಿಕ ಆವೃತ್ತಿ

ಮೇ 28ಕ್ಕೆ ವೈ.ಕೆ.ರಾಮಯ್ಯ – ಎನ್.ಆರ್.ರಂಗಯ್ಯ ಪ್ರಶಸ್ತಿಗಳ ಪ್ರದಾನ

ಮಂಡ್ಯ ಕರ್ನಾಟಕ ಸಂಘದ ವತಿಯಿಂದ ಮೇ 28ರಂದು ಬೆಳಿಗ್ಗೆ 11 ಗಂಟೆಗೆ ವೈ.ಕೆ.ರಾಮಯ್ಯ ಕೃಷಿ ತಜ್ಞ ಪ್ರಶಸ್ತಿ ಹಾಗೂ ಎನ್.ಆರ್.ರಂಗಯ್ಯ ಸಹಕಾರ ಪ್ರಶಸ್ತಿ ಪ್ರದಾನ ಸಮಾರಂಭವು ಮಂಡ್ಯನಗರದ ಕೆ.ವಿ.ಶಂಕರಗೌಡ ಶತಮಾನೋತ್ಸವ ಭವನದಲ್ಲಿ ನಡೆಯಲಿದೆ ಎಂದು ಕರ್ನಾಟಕ ಸಂಘ ಅಧ್ಯಕ್ಷ  ಪ್ರೊ.ಜಯಪ್ರಕಾಶ್ ಗೌಡ ತಿಳಿಸಿದದರು.

ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಾರಿಯ ವೈ.ಕೆ.ರಾಮಯ್ಯ ಕೃಷಿ ತಜ್ಞ ಪ್ರಶಸ್ತಿಯನ್ನು ಬೆಂಳಗೂರಿನ ಲಾಲ್ ಬಾಗ್ ಉದ್ಯಾನವನದ ತೋಟಗಳು ಮತ್ತು ಪುಷ್ಪಾಭಿವೃದ್ಧಿ ವಿಭಾಗ ಜಂಟಿ ನಿರ್ದೇಶಕ ಡಾ.ಎಂ.ಜಗದೀಶ್, ವೈ.ಕೆ.ರಾಮಯ್ಯ ಕೃಷಿ ಪ್ರಶಸ್ತಿಯನ್ನು ಮಂಡ್ಯದ ಪ್ರಗತಿಪರ ಕೃಷಿಕ ದೇವಯ್ಯ ದೇವೇಗೌಡನದೊಡ್ಡಿ ಅವರಿಗೆ ಪ್ರದಾನ ಮಾಡಲಾಗುವುದು ಎಂದರು.

ಎನ್.ಆರ್.ರಂಗಯ್ಯ ಸಹಕಾರ ಪ್ರಶಸ್ತಿಯನ್ನು ಮಂಡ್ಯದ ಹಿರಿಯ ಸಹಕಾರಿ ಜಿ.ಟಿ.ಪುಟ್ಟಸ್ವಾಮಿ ಅವರಿಗೆ ಕೃಷಿ ಆರ್ಥಿಕ ತಜ್ಞ ಡಾ.ಪ್ರಕಾಶ್ ಕಮ್ಮರಡಿ ಪ್ರದಾನ ಮಾಡುವರು. ಸಮಾರಂಭದ ಅಧ್ಯಕ್ಷಯನ್ನು ವಕೀಲ ಎ.ಇಮ್ಮಾನ್ಯೂಯೆಲ್ ವಹಿಸಿದರು. ಉಪನ್ಯಾಸಕ ಜಯರಾಮ್ ಕೋಣನಹಳ್ಳಿ ಅಭಿನಂದನಾ ನುಡಿ ನುಡಿಯುವರು. ವಾಸ್ತು ವಿನ್ಯಾಸಗಾರ ಎನ್.ಆರ್.ಮಂಜುನಾಥ್ ಹಾಗೂ ವೈ.ಕೆ.ರಾಮಯ್ಯನವರ ಮಗಳು ವೈ.ಆರ್.ಚೇತನ ಉಪಸ್ಥಿತರಿರುವರು ಎಂದರು.

ಗೋ‍ಷ್ಠಿಯಲ್ಲಿ ಚಂದಗಾಲು ಲೋಕೇಶ್, ನಾಗಪ್ಪ ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!