ಕರ್ನಾಟಕ ಸಂಘದ ವತಿಯಿಂದ ಪ್ರೊ.ಜಯಪ್ರಕಾಶಗೌಡ – 75, ಬದುಕು- ಬರಹ : ವಿಚಾರ ಗೋಷ್ಠಿ ಹಾಗೂ ಆತ್ಮಕಥಾನಕ : ಹೋರಾಟದ ಹೆಜ್ಜೆಗಳು ಪುಸ್ತಕ ಬಿಡುಗಡೆ ಸಮಾರಂಭ, ವಿಚಾರಗೋಷ್ಠಿಯು ಜು.8ರಂದು ಮಧ್ಯಾಹ್ನ 2.30 ಗಂಟೆಗೆ ಮಂಡ್ಯನಗರದ ರೈತ ಸಭಾಂಗಣದಲ್ಲಿ ನಡೆಯಲಿದೆ ಎಂದು ಕರ್ನಾಟಕ ಸಂಘದ ಕಾರ್ಯದರ್ಶಿ ಲೋಕೇಶ್ ಚಂದಗಾಲು ಹೇಳಿದರು.
ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾಹಿತಿ ರಾಗೌ ಸಮಾರಂಭದ ಅಧ್ಯಕ್ಷತೆ ವಹಿಸುವರು. ಗೋಷ್ಠಿ – 1ರಲ್ಲಿ ಪ್ರೊ. ಜಯಪ್ರಕಾಶಗೌಡ ಸಾಹಿತ್ಯ ಮತ್ತು ಸಂಸ್ಕೃತಿ ಚಿಂತನೆ ಕುರಿತು ಡಾ.ಎಚ್.ಎಸ್.ಮುದ್ದೇಗೌಡ ಮಂಡನೆ ಮಾಡುವರು. ಗೋಷ್ಠಿ – 2ರಲ್ಲಿ ಪ್ರೊ.ಜಯಪ್ರಕಾಶಗೌಡ ವ್ಯಕ್ತಿಗತ ಸಂಬಂಧಗಳು ಕುರಿತು ಪ್ರೊ.ಬಿ.ಕೆ.ಚಂದ್ರಶೇಖರ್ ವಿಚಾರ ಮಂಡನೆ ಮಾಡುವರು. ಗೋಷ್ಠಿ- 3ರಲ್ಲಿ ಪ್ರೊ.ಜಯಪ್ರಕಾಶಗೌಡ – ರಂಗಭೂಮಿ ಕುರಿತು ಡಾ.ಎಸ್.ಬಿ.ಶಂಕರಗೌಡ ವಿಚಾರ ಮಂಡಿಸುವರು. ಗೋಷ್ಠಿ 4ರಲ್ಲಿ ಪ್ರೊ.ಜಯಪ್ರಕಾಶಗೌಡ – ಕರ್ನಾಟಕ ಸಂಘ ಕುರಿತು ಎಂ.ಕೆ. ಹರೀಶ್ ಕುಮಾರ್ ವಿಚಾರ ಮಂಡನೆ ಮಾಡುವರು ಎಂದರು.
ಸಂಜೆ 5.30 ಗಂಟೆಗೆ ಪುಸ್ತಕ ಬಿಡುಗಡೆ ಸಮಾರಂಭ ನಡೆಯಲಿದ್ದು, ಮಾಜಿ ಶಾಸಕ ಎಂ.ಶ್ರೀನಿವಾಸ್ ಅಧ್ಯಕ್ಷತೆ ವಹಿಸುವರು. ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಮೋಹನ್ ಆಳ್ವ ಕೃತಿ ಬಿಡುಗಡೆ ಮಾಡುವರು. ಕೃತಿ ಕುರಿತು ಸಾಹಿತಿ ಡಾ.ರಾಜಪ್ಪ ದಳವಾಯಿ ಮಾತನಾಡುವರು. ಮುಖ್ಯ ಅತಿಥಿಗಳಾಗಿ ಶಾಸಕ ಮಧು ಜಿ.ಮಾದೇಗೌಡ, ಮಾಜಿ ಶಾಸಕರಾದ ಬಿ.ರಾಮಕೃಷ್ಣ ಹಾಗೂ ಕೆ.ಟಿ.ಶ್ರೀಕಂಠೇಗೌಡ ಭಾಗವಹಿಸುವರು ಎಂದರು.
ಗೋಷ್ಠಿಯಲ್ಲಿ ಮುಖಂಡರಾದ ಹೆಚ್.ಬಿ.ನಾಗಪ್ಪ, ಎಚ್.ಡಿ.ಸೋಮಶೇಖರ್ ಹಾಗೂ ನಾಗರೇವಕ್ಕ ಉಪಸ್ಥಿತರಿದ್ದರು.
Supe super nudi Karnataka