ಮಂಡ್ಯ ತಾಲೂಕು ಹೊಳಲು ಗ್ರಾಮದ ಜಂಗಿ ಮೊಹಲ್ಲಾ ಸರ್ಕಲ್ ಯುವಕರೆಲ್ಲರೂ ಸೇರಿ ಮಣ್ಣಿನಿಂದ ತಯಾರು ಮಾಡಿದ ಮಳೆರಾಯನ ಮೂರ್ತಿಯನ್ನು ವಿಶೇಷವಾಗಿ ಪೂಜಿಸಿ, ನಂತರ ಗ್ರಾಮದ ಎಲ್ಲಾ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಸಲ್ಲಿಸಿ ,ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಿ “ಉಯ್ಯೋ ಉಯ್ಯೋ ಮಳೆರಾಯ” “ನಮ್ಮ ಬೆಳಗೆ ನೀರಿಲ್ಲ “ಎಂದು ಘೋಷಣೆ ಕೂಗಿದರು.
ವಿವಿಧ ಘೋಷಣೆಗಳನ್ನು ಪ್ರಮುಖ ಬೀದಿಗಳಲ್ಲಿ ತಮಟೆ , ನಗರಿ ಸಮೇತ ಮೆರವಣಿಗೆ ಮಾಡಿಕೊಂಡು ಹೋಗುವಾಗ ಗ್ರಾಮದ ಪ್ರತಿಯೊಂದು ಮನೆಗಳಲ್ಲಿ ಯುವಕರಿಗೆ ನೀರಿನಾಭಿಷೇಕ ಮಾಡಿದರು ಹಾಗೂ ದವಸ ಧಾನ್ಯಗಳನ್ನನೀಡಿ ಮಳೆ ಬರಲೆಂದು ಹಾರೈಸಿದರು.
ಈ ಸಂದರ್ಭದಲ್ಲಿ ಗ್ರಾ ಪಂ ಮಾಜಿ ಅಧ್ಯಕ್ಷ ಹೆಚ್ಡಿ ರವಿ, ಗ್ರಾಮದ ಮುಖಂಡರಾದ ದೊರಪ್ಪ, ರಾಜೇಶ್, ದರ್ಶನ್ ಹಾಗೂ ಯುವಕರೆಲ್ಲರೂ ಮೆರೆವಣಿಗೆಯಲ್ಲಿ ಪಾಲ್ಗೊಂಡಿದ್ದರು